

UP: ಉತ್ತರ ಪ್ರದೇಶದ ಲಖನೌನಿನ ಜಿಸಿಆರ್ಜಿ ಕಾಲೇಜಿನ ಎದುರಿಗೆ ಇದ್ದ ವೆಜ್ ಬಿರಿಯಾನಿ (Biryani Shop) ಅಂಗಡಿಯೊಂದರ ಫ್ರೀಜರ್ನಲ್ಲಿ ಮಾನವನ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ
ಸಸ್ಯಹಾರ ಹಾಗೂ ಮಾಂಸಾಹಾರ ಎರಡು ಪದಾರ್ಥಗಳು ಸಿಗುವ ಹೋಟೆಲ್ಗಳಿಗೆ ಕೆಲವೊಮ್ಮೆ ಸಸ್ಯಹಾರಿಗಳು ಹೋಗಲು ಹಿಂದೇಟು ಹಾಕುತ್ತಾರೆ. ಆದರೆ ಇದೀಗ ನಾವು ಹೇಳ ಹೊರಟಿರುವ ಸ್ಟೋರಿ ಕೇಳಿದರೆ ಮಾಂಸಾಹಾರಿಗಳು ಕೂಡ ಇನ್ನು ಮುಂದೆ ಯಾವುದಾದರೂ ಮಾಂಸಹಾರದ ಹೋಟೆಲ್ಗಳಿಗೆ ಹೋಗುವಾಗ ಇಂದು ಮುಂದೆ ನೋಡುವ ಸ್ಥಿತಿ ಬರುವುದು ಖಂಡಿತ.
ಯಸ್, ವರದಿಗಳ ಪ್ರಕಾರ, ಅಂಗಡಿ ಮಾಲೀಕನ ತಂದೆ ತೀರಿಹೋಗಿದ್ದು ಅನವು ನಾಲ್ಕು ದಿನಗಳಿಂದ ಅಂಗಡಿಗೆ ಬೀಗ ಹಾಕಿ ಹೋಗಿದ್ದಾನೆ. ನಂತರ ಅಂಗಡಿಗೆ ಮರಳಿದ ಮಾಲೀಕ ಫ್ರೀಜರ್ನ್ನು ತೆಗೆದಾಗ ಅಲ್ಲಿ ಮನುಷ್ಯನ ದೇಹವಿರುವುದು ಗೊತ್ತಾಗಿದೆ. ಹೆಣ ಕಂಡು ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ.
ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಆ ವ್ಯಕ್ತಿಯ ದೇಹ ಹೇಗೆ ಅಂಗಡಿಯ ಫ್ರೀಜರ್ನ್ನು ಸೇರಿತು ಎಂದು ತಿಳಿದುಬಂದಿಲ್ಲ. ಪೊಲೀಸರು ಅಂಗಡಿಯಲ್ಲಿದ್ದ ಸಿಸಿಟಿವಿ ಪೂಟೇಜ್ನ್ನು ಪಡೆದುಕೊಂಡಿದ್ದು, ಅಂಗಡಿ ಮಾಲೀಕ ಮತ್ತು ಸ್ಥಳೀಯರನ್ನು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.
