ನನ್ನ ಮದುವೆ ಮಾಡಿಲ್ಲ ಎನ್ನುವ ಕಾರಣಕ್ಕೆ 41 ವರ್ಷದ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ಬಂದ ಘಟನೆ ನಡೆದಿದೆ. ವಯಸ್ಸಾಗಿದೆ, ಬಂದ ಸಂಬಂಧವನ್ನೆಲ್ಲ ಅಣ್ಣ-ಅತ್ತಿಗೆ ನಿರಾಕರಿಸ್ತಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ.


ಪ್ರಯಾಗ್ರಾಜ್ನ 41 ವರ್ಷದ ಮಹಿಳೆಯೊಬ್ಬಳು ತನ್ನ ಕುಟುಂಬದ ವಿರುದ್ಧ ಮದುವೆ ವಿಷಯಕ್ಕೆ ಸಂಬಂಧಪಟ್ಟಂತೆ ಆರೋಪ ಮಾಡಿದ್ದಾಳೆ. ನನಗೆ ಇಷ್ಟು ವಯಸ್ಸಾದರೂ ಮನೆಯವರು ಮದುವೆ ಮಾಡಲು ಮನಸ್ಸು ಮಾಡ್ತಿಲ್ಲ, ಹೀಗಾಗಿ ಮಹಿಳೆ ಪೋಷಕರು ಹಾಗೂ ಒಡಹುಟ್ಟಿದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಹಾಗಾಗಿ ತನ್ನ ಮದುವೆ ಏರ್ಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಳೆ.
ಸರೈ ಇನಾಯರ್ ಪೊಲೀಸ್ ಠಾಣೆ ಪ್ರದೇಶದ ಮಣಾಪುರದ ನಿವಾಸಿಯಾಗಿರುವ ಮಾಧುರಿ ಪಟೇಲ್ ನೀಡಿರುವ ದೂರಿನ ಪ್ರಕಾರ, ನಾನು ನಾನು 20 ವರ್ಷಗಳಿಂದ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದೇನೆ. ಕೌಟುಂಬಿಕ ಕಾರಣಗಳಿಂದಾಗಿ ನನ್ನ ಹೆತ್ತವರು ನನ್ನನ್ನು ಕುಟುಂಬದಿಂದ ದೂರ ಮಾಡಿದ್ದಾರೆ. ನನ್ನ ತಂದೆ ರಾಮರಾಜ್ ಪಟೇಲ್, ತಾಯಿ ಬಿಮ್ಲಾ ದೇವಿ, ಸಹೋದರ ರಾಜೇಂದ್ರ ಪಟೇಲ್, ಅತ್ತಿಗೆ ಪೂನಂ ಪಟೇಲ್ ಮತ್ತು ಸಹೋದರಿ ವಿದ್ಯಾ ಪಟೇಲ್ ನನ್ನನ್ನು ಮೌಖಿಕವಾಗಿ ನಿಂದಿಸುತ್ತಿದ್ದಾರೆ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಕುಟುಂಬ ಸದಸ್ಯರು ಕೂಡ ನನ್ನನ್ನು ಹೊಡೆದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾಳೆ.
ಕಳೆದ 20 ವರ್ಷದಿಂದ ಒಂಟಿಯಾಗಿ ವಾಸಿಸುತ್ತಿದ್ದು, ಕುಟುಂಬದಿಂದ ಯಾವುದೇ ಆರ್ಥಿಕ ಬೆಂಬಲ ಇಲ್ಲ. ಶಾಲೆಯಲ್ಲಿ ಕಲಿಸೋದು, ಬಟ್ಟೆ ಅಂಗಡಿಯಲ್ಲಿ ಮತ್ತು ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡಿ ಆಕೆ ಜೀವನ ನಡೆಸುತ್ತಿದ್ದಾಳಂತೆ.
ಏಪ್ರಿಲ್ 27 ರಂದು ಆಕೆ ಸ್ನಾನ ಮಾಡುವ ಸಮಯದಲ್ಲಿ ಅಪ್ಪ, ಅಪ್ಪ, ಅಣ್ಣ, ಅತ್ತಿಗೆ ಹಾಗೂ ಸಹೋದರಿ ದಾಳಿ ಮಾಡಿದ್ದಾರಂತೆ. ಆಕೆಯನ್ನು ಕೊಲ್ಲುವ ಪ್ರಯತ್ನ ನಡೆಸಿದ್ದಾರಂತೆ. ಆಕೆಗೆ ಒಬ್ಬ ಅಣ್ಣ, ಇಬ್ಬರು ತಂಗಿಯರು. ತಂಗಿಯರ ವಯಸ್ಸು 37, 34 ಆಗಿದೆ. ಆದ್ರೆ ಅವರಿಗೂ ಇನ್ನೂ ಮದುವೆ ಆಗಿಲ್ಲ. ಮಾಧುರಿ ಡಿ.ಎಲ್. ಎಡ್ ಮುಗಿಸಿದ್ದು, ಸಿಟಿಇಟಿ ಮತ್ತು ಟಿಇಟಿ ಪರೀಕ್ಷೆ ಬರೆಯುತ್ತಿದ್ದಾರೆ. ತಂದೆ ರೈತ. ಹಾಗೇ ಟ್ರ್ಯಾಕ್ಟರ್ ಓಡಿಸಿ ಜೀವನ ನಡೆಸುತ್ತಿದ್ದಾರೆ. ಮದುವೆ ವಿಷ್ಯ ಬಂದಾಗ, ಅಣ್ಣ – ಅತ್ತಿಗೆ ಮದುವೆ ನಿರಾಕರಿಸೋದಲ್ಲದೆ, ಮದುವೆಗೆ ಹೆಚ್ಚು ಖರ್ಚಾಗುತ್ತದೆ ಅಂತ ವಾದ ಮಾಡ್ತಾರೆ. ಜೊತೆಗೆ ಆಸ್ತಿ ಬರೆಸಿಕೊಳ್ಳುವ ಪ್ರಯತ್ನ ನಡೆಸ್ತಾರೆ ಅಂತ ಮಾಧುರಿ ದೂರಿದ್ದಾಳೆ.
ಪೊಲೀಸ್ ಠಾಣೆಯಲ್ಲಿ ಮಾಧುರಿ ಪಾಲಕರು, ಒಡಹುಟ್ಟಿದವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸೂಕ್ತ ಮಾಹಿತಿ ನಂತ್ರ ಕ್ರಮಕೈಗೊಳ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

