2
ಬೆಳ್ತಂಗಡಿ :ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ನಡೆಯುತ್ತಿರುವ 5ನೇ ವರ್ಷದ ವಿಷುಕಣಿ 5.0 ಕಾರ್ಯಕ್ರಮವು ಇದೇ ಬರುವ ಮೇ 17, ರವಿವಾರ ಕೃಷ್ಣಾನುಗ್ರಹ ಸಭಾಭವನ ಉಜಿರೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಸಮಾರಂಭದ ಪೂರ್ವಭಾವಿ ಸಭೆಯು ಕಾರ್ಯಕ್ರಮದ ರೂವಾರಿ ಶಾಸಕರಾದ ಹರೀಶ್ ಪೂಂಜಾ ಇವರ ನೇತೃತ್ವದಲ್ಲಿ ಹವ್ಯಕ ಸಭಾಭವನ ಗುರುವಾಯನಕೆರೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರಸಾದ್ ಬಿ. ಎಸ್, ಅನಿಲ್ ಅಕ್ಷರ, ಬಾಲಕೃಷ್ಣ ನೈಮಿಷ, ದಿವಿನೇಶ್ ಚಾರ್ಮಾಡಿ, ಹಾಗೂ ಅನೇಕ ಪ್ರಮುಖರು ಉಪಸ್ಥಿತರಿದ್ದರು.


