

ಪ್ರತಿಷ್ಠಿತ “ರಾಮಾನುಜನ್ ನ್ಯಾಷನಲ್ ಮಾಥ್ಸ್ ಚಾಲೆಂಜ್” ನಲ್ಲಿ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸಿ ಭರ್ಜರಿ ಯಶಸ್ಸು ಗಳಿಸಿದ್ದು ವಿದ್ಯಾಮಾತಾದ ನಿರಂತರ ತರಬೇತಿ ಮತ್ತು ಮಾರ್ಗದರ್ಶನದ ಫಲವಾಗಿ ಅತ್ಯುತ್ತಮ ಫಲಿತಾಂಶ ಲಭಿಸಿದೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಈ ವಿಶೇಷ ಸ್ಪರ್ಧೆಯಲ್ಲಿ 1 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು ಭಾಗವಹಿಸಿದ್ದು, ವಿದ್ಯಾಮಾತಾದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಲ್ಲಿ 2 ವಿದ್ಯಾರ್ಥಿಗಳು ಶೇ.100 ಫಲಿತಾಂಶ ದಾಖಲಿಸಿದ್ದು ಒಬ್ಬ ವಿದ್ಯಾರ್ಥಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ತರಬೇತಿ ನೀಡಿದ್ದ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈ
ಸ್ವತಃ ತರಬೇತುದಾರರಾಗಿರುವ ವಿದ್ಯಾಮಾತಾ ಅಕಾಡೆಮಿಯ ನಿರ್ದೇಶಕಿ ಶ್ರೀಮತಿ ರಮ್ಯಾ ಭಾಗ್ಯೇಶ್ ರೈ ರವರ ತರಬೇತಿ ಮತ್ತು ಮಾರ್ಗದರ್ಶನವು ರಾಷ್ಟ ಮಟ್ಟದ ರಾಮಾನುಜನ್ ಮಾಥ್ಸ್ ಚಾಲೆಂಜ್ ನಲ್ಲಿ ವಿದ್ಯಾಮಾತಾದ ವಿದ್ಯಾರ್ಥಿಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು, ವಿಶೇಷ ಗಣಿತ ತಜ್ಞೆಯಾಗಿರುವ ರಮ್ಯಾ ಭಾಗ್ಯೇಶ್ ರೈ ರವರು ಈಗಾಗಲೇ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನೂರಕ್ಕೂ ಅಧಿಕ ತರಬೇತಿ ಪ್ರಮಾಣಪತ್ರವನ್ನು ಹೊಂದಿದ್ದು ನಿರಂತರ ಅಧ್ಯಯನಶೀಲರಾಗಿರುತ್ತಾರೆ,ಅವರು ನೀಡಿದ ತರಬೇತಿಯ ಪ್ರಯತ್ನದ ಫಲವಾಗಿ ವಿದ್ಯಾಮಾತಾದ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಿದೆ.
ರಾಮಾನುಜನ್ ನ್ಯಾಷನಲ್ ಮಾಥ್ಸ್ ಚಾಲೆಂಜ್ ನ ವಿಶಿಷ್ಟತೆ ಮತ್ತು ವಿದ್ಯಾಮಾತಾದ ಸಾಧನೆ
ವಿವಿಧ ಆಯಾಮಗಳಲ್ಲಿ ನಡೆಯುವ ಈ ಸ್ಪರ್ಧೆಯು ಪ್ರತೀ ವರ್ಷವೂ ಆಯೋಜನೆಯಾಗುತ್ತಿದ್ದು ಮಕ್ಕಳಿಗೆ ಬಾಲ್ಯದಲ್ಲೇ ಗಣಿತಶಾಸ್ತ್ರದ ಕುರಿತು ಅಭಿರುಚಿ ಹೊಂದಲು ಈ ಪರೀಕ್ಷಾ ಸ್ಪರ್ಧೆಯು ಸಹಕಾರಿಯಾಗಿದೆ, ಎರಡು ಹಂತದಲ್ಲಿ ನಡೆಯುವ ಈ ಪರೀಕ್ಷೆಯು ಮೊದಲ ಹಂತದಲ್ಲಿ ಅರ್ಹತೆ ಪಡೆದವರಿಗೆ ಮಾತ್ರ ಎರಡನೇ ಹಂತದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು ನಾಲ್ಕನೇ ತರಗತಿಯಿಂದ PUC ಹಂತದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದ್ದು ವಿದ್ಯಾಮಾತಾ ಅಕಾಡೆಮಿಯು ನಿರಂತರವಾದ ತರಬೇತಿ ನೀಡುತ್ತಿದ್ದು, ವಿದ್ಯಾಮಾತಾದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಲ್ಲಿ ಸುಳ್ಯ ತಾಲೂಕು ಆಲೆಟ್ಟಿಯ ಅರಂಬೂರು ಮನೆಯ ಮಹಮ್ಮದ್ ಬಶೀರ್ ರವರ ವರ ಪುತ್ರಿ ಪ್ರಸ್ತುತ ಶಾರ್ಜಾ ದ GEMS ಮಿಲೇನಿಯಂ ಶಾಲೆಯ ವಿದ್ಯಾರ್ಥಿನಿ ಈವಾ ಫಾತಿಮಾ ಬಶೀರ್, ಮಂಗಳೂರಿನ ಬೆಳ್ವಾಯಿ ಗ್ರಾಮದ ಈಶ್ವರ ಭಟ್ ಎಂ ರವರ ಪುತ್ರ ಎಕ್ಸಲೆಂಟ್ CBSE ಶಾಲೆ ಮೂಡಬಿದಿರೆ ಇಲ್ಲಿಯ ವಿದ್ಯಾರ್ಥಿ ಸಾತ್ವಿಕ್ ಶರ್ಮಾ ಎಂ ರವರು ಶೇ. 100 ಫಲಿತಾಂಶ ದಾಖಲಿಸಿಕೊಂಡಿದ್ದು, ಪುತ್ತೂರು ತಾಲೂಕು ತೆಂಕಿಲ ನಿವಾಸಿ ಶಂಕರ್ ಭಟ್ ರವರ ಪುತ್ರ ಸುಧಾನ ಶಾಲೆ ಪುತ್ತೂರು ಇಲ್ಲಿಯ ವಿದ್ಯಾರ್ಥಿ ವಿಶ್ವಾಸ್ ನಾರಾಯಣ್ ಭಟ್ ರವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿ ತನ್ನ ಹೆತ್ತವರ, ಶಾಲೆಯ ಹಾಗೂ ಈ ಪರೀಕ್ಷೆಗೆ ನಿರಂತರ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ ವಿದ್ಯಾಮಾತಾ ಅಕಾಡೆಮಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿ ಅಭಿನಂದಿಸಿದ್ದಾರೆ.
ವಿದ್ಯಾಮಾತಾ ಅಕಾಡೆಮಿಯು 2022ರಿಂದ ನಿರಂತರವಾಗಿ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಭರ್ಜರಿ ಫಲಿತಾಂಶ ದಾಖಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು
ಅಂತರಾಷ್ಟ್ರೀಯ ಅಬಾಕಸ್ ಚಾಂಪಿಯನ್ ಖ್ಯಾತಿಯ ವಿದ್ಯಾಮಾತಾದಲ್ಲಿ ಮಾಥ್ಸ್ ಕ್ಲಬ್ ಎಂಬ ವಿಶೇಷ ಕೌಶಲ್ಯಯುತ ತರಬೇತಿ
ವಿದ್ಯಾಮಾತಾ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗೆಗಳಿಗೆ ತರಬೇತಿ ನೀಡುವುದರ ಜೊತೆಗೆ 7ರಿಂದ 14ವರ್ಷದ ವಯೋಮಿತಿಯ ಮಕ್ಕಳಿಗೆ ಶಾಲಾ ಹಂತದಲ್ಲೇ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಸದುದ್ದೇಶದಿಂದ ಅಬಾಕಸ್, ವೇದಿಕ್ ಗಣಿತ, ಮಾನಸಿಕ ಸಾಮರ್ಥ್ಯ ಕುರಿತು ತರಬೇತಿಗಳನ್ನು ಒಂದೇ ವೇದಿಕೆಯಲ್ಲಿ ನೀಡುವ ಮಾಥ್ಸ್ ಕ್ಲಬ್ ಎಂಬ ವಿನೂತನ ಮಾದರಿಯ ತರಬೇತಿ ಪ್ರಾರಂಭಿಸಿದ್ದು ಈ ತರಬೇತಿಗಳು ಮಕ್ಕಳ ಬೌದ್ಧಿಕ ಸಾಮರ್ಥ್ಯದ ಮಟ್ಟವನ್ನು ವೃದ್ಧಿಸಿ ಭವಿಷ್ಯದ ಅರ್ಹತಾ ಪರೀಕ್ಷೆಗಳಾದ ನವೋದಯ, ಸೈನಿಕ ಶಾಲೆ, ಮೊರಾರ್ಜಿ ಹಾಗೂ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಾಲ್ಯದಲ್ಲೇ ಪೂರ್ವ ತಯಾರಿ ನಡೆಸುವವರಿಗೂ ಸಹ ಈ ಮಾಥ್ಸ್ ಕ್ಲಬ್ ಎಂಬ ಹೊಸ ತರಬೇತಿಯು ಬಹುಮುಖ್ಯ ಪಾತ್ರವಹಿಸುತ್ತದೆ.
ಆಸಕ್ತರು ವಿದ್ಯಾಮಾತಾ ಅಕಾಡೆಮಿಯ ಸಂಪರ್ಕ ಸಂಖ್ಯೆ 9620468869ಯನ್ನು ಸಂಪರ್ಕಿಸಬಹುದು.
