

Supreme Court : ದೇಶದ ರಾಜಕೀಯದಲ್ಲಿ ಇದೀಗ ಉಚಿತ ಯೋಜನೆಗಳ ಸಂಸ್ಕೃತಿಯೊಂದು ಹುಟ್ಟುಕೊಂಡಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದು ರಾಜಕೀಯ ನಾಯಕರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಈ ಉಚಿತ ಯೋಜನೆಗಳೇ ಸಾಕ್ಷಿಯಾಗಿದೆ. ಈ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಅಗಿತವಾಗುವುದು ಮಾತ್ರವಲ್ಲದೆ ಇಡೀ ದೇಶದ ಜನರನ್ನೇ ಇವು ಸೋಮಾರಿಯನ್ನಾಗಿ ಮಾರ್ಪಾಡು ಮಾಡುತ್ತಿವೆ. ಸದ್ಯ ಇದೀಗ ಈ ಉಚಿತ ಯೋಜನೆಗಳ ವಿರುದ್ಧ ಸುಪ್ರೀಂ ಕೋರ್ಟ್ ಸಿಡಿದೆದ್ದಿದೆ.
ಹೌದು,ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ ಮಾಲಾ ಬಾಗ್ಚಿ, ನ್ಯಾಯಮೂರ್ತಿ ವಿಪುಲ್ ಪಾಂಚೋಲಿ ಅವರಿರುವ ಮೂವರು ಸದಸ್ಯರಿರುವ ಪೀಠ, ಪಂಚ ಗ್ಯಾರಂಟಿಗಳನ್ನು ನೀಡುತ್ತಿರುವ ಕರ್ನಾಟಕ ಸರ್ಕಾರವನ್ನು ಪ್ರಸ್ತಾಪಿಸದೆ, ದೇಶದ ಹಲವಾರು ರಾಜ್ಯಗಳು ಜನರಿಗೆ ನೀಡುತ್ತಿರುವ ಬಿಟ್ಟಿ ಉಡುಗೊರೆಗಳ ವಿರುದ್ಧ ಸಿಡಿದೆದ್ದಿದೆ.
ರಾಜಕೀಯ ಪಕ್ಷಗಳು ನೀಡುವ ಉಚಿತ ಕೊಡುಗೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಇದು ತಮಿಳುನಾಡು ಸರ್ಕಾರ ಮಾತ್ರವಲ್ಲ, ದೇಶದಲ್ಲಿರುವ ಇನ್ನೂ ಹಲವಾರು ರಾಜ್ಯಗಳಲ್ಲಿನ ಸರ್ಕಾರ ಇದಕ್ಕೆ ಹೊರತಲ್ಲ. ಇದೆಂತಹ ಸಂಸ್ಕೃತಿಯನ್ನು ನಾವು ಬೆಳೆಸುತ್ತಿದ್ದೇವೆ?” ವಿವೇಚನಾರಹಿತವಾಗಿ ಜನರ ತೆರಿಗೆ ಹಣವನ್ನು ಈ ರೀತಿ ಉಚಿತ ಉಡುಗೊರೆಗಳ ಮೂಲಕ ನೀಡುವುದು ಎಷ್ಟು ಸರಿ? ತಮ್ಮ ಜೀವನ ಸರಿದೂಗಿಸಲು ಯಾರಿಗೆ ಸಾಧ್ಯವಿದೆ ಯಾರಿಗೆ ಸಾಧ್ಯವಿಲ್ಲ ಎಂಬುದನ್ನು ಯಾವ ರೀತಿ ಪತ್ತೆ ಹಚ್ಚುತ್ತೀರಿ? ಇದು ಒಂದು ವರ್ಗದವರ ಓಲೈಕೆಯಲ್ಲದೆ ಮತ್ತೇನೂ ಅಲ್ಲ. ಇದರಿಂದ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಸಿಲುವುದಿಲ್ಲವೆ? ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳನ್ನು ಪ್ರಶ್ನೆ ಮಾಡಿದೆ.
ಅಗತ್ಯ ಇರುವವರಿಗೆ, ಪಾವತಿ ಮಾಡಲು ಆಗದವರಿಗೆ ಉಚಿತವಾಗಿ ಕೊಡುವುದಕ್ಕೆ ಅರ್ಥವಿದೆ. ಆದರೆ ನೀವು ಶಕ್ತರು ಮತ್ತು ಶಕ್ತರಲ್ಲದವರು ಎಂಬ ಭೇದವಿಲ್ಲದೆ ವಿತರಿಸಿದರೆ… ಶಿಕ್ಷಣವನ್ನು ಪಡೆಯಲಾಗದ ಮಕ್ಕಳಿದ್ದಾರೆ. ಅವರಿಗೆ ರಾಜ್ಯ ಒದಗಿಸಬೇಕು… ಅದು ರಾಜ್ಯದ ಕರ್ತವ್ಯ. ಆದರೆ ಈ ಉಚಿತ ವಸ್ತುಗಳು ಮೊದಲು ಶ್ರೀಮಂತರು ಜೇಬಿಗೆ ಬರುತ್ತವೆ. ರಾಜ್ಯಗಳು ಈ ನೀತಿ ಚೌಕಟ್ಟುಗಳನ್ನು ಮರುಪರಿಶೀಲಿಸುವ ಸಮಯವಲ್ಲವೇ?” ಎಂದು ಮುಖ್ಯ ನ್ಯಾಯಾಧೀಶರು ಕೇಳಿದರು.
ಕೆಲವೊಮ್ಮೆ ನಾವು ನಿಜವಾಗಿಯೂ ತೊಂದರೆಗೊಳಗಾಗುತ್ತೇವೆ. ನೀವು ಹೆಚ್ಚುವರಿ ಆದಾಯ ಹೊಂದಿರುವ ರಾಜ್ಯವಾಗಿದ್ದರೂ ಸಹ ಒಟ್ಟಾರೆ ಸಾರ್ವಜನಿಕರ ಅಭಿವೃದ್ಧಿಗಾಗಿ ಖರ್ಚು ಮಾಡುವುದು – ಮೂಲಸೌಕರ್ಯ, ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಅಭಿವೃದ್ಧಿಪಡಿಸಬೇಕು. ಆದರೆ ಚುನಾವಣೆಯ ಸಮಯದಲ್ಲಿ ನೀವು ವಸ್ತುಗಳನ್ನು ವಿತರಿಸುತ್ತಲೇ ಇರುತ್ತೀರಿ” ಎಂದು ಪೀಠ ಹೇಳಿದೆ.