Home News Plane Crash: ಅಹ್ಮದಾಬಾದ್ ವಿಮಾನ ದುರಂತಕ್ಕೆ ಪೈಲಟ್‌ನ ‘ಉದ್ದೇಶಪೂರ್ವಕ ಕೃತ್ಯ’ವೇ ಕಾರಣ? ವರದಿ ಬಹಿರಂಗ!!

Plane Crash: ಅಹ್ಮದಾಬಾದ್ ವಿಮಾನ ದುರಂತಕ್ಕೆ ಪೈಲಟ್‌ನ ‘ಉದ್ದೇಶಪೂರ್ವಕ ಕೃತ್ಯ’ವೇ ಕಾರಣ? ವರದಿ ಬಹಿರಂಗ!!

Hindu neighbor gifts plot of land

Hindu neighbour gifts land to Muslim journalist

Plane Crash: ದೇಶದ ಭೀಕರ ವಿಮಾನ ದುರಂತಗಳಲ್ಲಿ ಒಂದಾದ ಅಹಮದಾಬಾದ್‌ ಏರ್‌ ಇಂಡಿಯಾ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ವಿಮಾನ ದುರಂತವು ತಾಂತ್ರಿಕ ದೋಷದಿಂದ ಸಂಭವಿಸಿದ್ದಲ್ಲ, ಬದಲಾಗಿ ಇದು ಒಬ್ಬರ ಉದ್ದೇಶಪೂರ್ವಕ ಕೃತ್ಯ ಎಂಬ ತೀರ್ಮಾನಕ್ಕೆ ತನಿಖಾಧಿಕಾರಿಗಳು ಬಂದಿದ್ದಾರೆ.

ಜೂನ್‌ 12ರಂದು ಮಧ್ಯಾಹ್ನ 1:39ರ ವೇಳೆಗೆ ಅಹಮದಾಬಾದ್‌ನಿಂದ ಲಂಡನ್‌ ಗ್ಯಾತ್ವಿಕ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟ ಏರ್‌ ಇಂಡಿಯಾ ಬೋಯಿಂಗ್‌ 787-8 ಡ್ರೀಮ್‌ಲೈನರ್‌ ವಿಮಾನವು ಟೇಕಾಫ್‌ ಆದ 35 ಸೆಕೆಂಡುಗಳಲ್ಲಿ ವಿಮಾನ ನಿಲ್ದಾಣದ ಸಮೀಪವಿರುವ ಬಿ.ಜೆ. ಮೆಡಿಕಲ್‌ ಆಸ್ಪತ್ರೆಯ ಹಾಸ್ಟೆಲ್‌ ಮೇಲೆ ಪತನವಾಯಿತು. ಈ ವೇಳೆ ವಿಮಾನದಲ್ಲಿದ್ದ 241 ಜನರ ಪೈಕಿ 240 ಜನರು ಸಜೀವ ದಹನರಾದರು. ಇದೇ ವೇಳೆ ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರೂ ಸಹ ಅಸುನೀಗಿದ್ದರು. ಪವಾಡಸದೃಶವಾಗಿ ವಿಶ್ವಾಸ್‌ ರಮೇಶ್‌ ಎಂಬ ಬ್ರಿಟೀಶ್‌ ಪ್ರಜೆ ಬಚಾವ್‌ ಆಗಿದ್ದರು. ದುರದೃಷ್ಟವಶಾತ್‌ ಹಾಸ್ಟೆಲ್‌ ಮತ್ತು ಸುತ್ತಮುತ್ತ ಇದ್ದವರ ಪೈಕಿ 20 ಜನರು ಅಸುನೀಗಿದ್ದರು. ಈಗ ಈ ಘಟನೆ ಬಗ್ಗೆ ಈ ಬಗ್ಗೆ ಇಟಲಿಯ ದೈನಿಕ ‘ಕೊರಿಯರ್ ಡೆಲ್ಲಾ ಸೆರಾ’ ವರದಿ ಮಾಡಿದೆ.

ತನಿಖಾ ವರದಿಯಲ್ಲೇನಿದೆ?

ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ ಮತ್ತು ಅಮೆರಿಕದ ತಜ್ಞರು ನಡೆಸಿದ ಜಂಟಿ ತನಿಖೆಯಲ್ಲಿ, ಇಂಜಿನ್‌ಗೆ ಇಂಧನ ಪೂರೈಕೆಯನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿರುವುದು ಪತ್ತೆಯಾಗಿದೆ. ಕಪ್ಪು ಪೆಟ್ಟಿಗೆಯ ದತ್ತಾಂಶಗಳ ಪ್ರಕಾರ, ವಿಮಾನದ ಇಂಜಿನ್ ಸ್ಥಗಿತಗೊಳಿಸುವ ಸ್ವಿಚ್‌ಗಳನ್ನು ಮ್ಯಾನುಯಲ್ ಆಗಿ ಆಫ್ ಮಾಡಲಾಗಿತ್ತು. ಕಾಕ್‌ಪಿಟ್ ವಾಯ್ಸ್ ರೆಕಾರ್ಡಿಂಗ್‌ನಲ್ಲಿ, ಒಬ್ಬ ಪೈಲಟ್ “ನೀನು ಇಂಧನ ಪೂರೈಕೆಯನ್ನು ಏಕೆ ಕಟ್ ಮಾಡಿದೆ?” ಎಂದು ಕೇಳಿರುವುದು ಮತ್ತು ಇನ್ನೊಬ್ಬರು “ನಾನು ಹಾಗೆ ಮಾಡಿಲ್ಲ” ಎಂದು ಉತ್ತರಿಸಿರುವುದು ದಾಖಲಾಗಿದೆ.

ಪೈಲಟ್ ಮೇಲಿರುವ ಶಂಕೆ

ಈ ಪ್ರಕರಣದಲ್ಲಿ ಪೈಲಟ್-ಇನ್-ಕಮಾಂಡ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಬರ್ವಾಲ್ ಅವರ ಮೇಲೆ ಹೆಚ್ಚಿನ ಶಂಕೆ ವ್ಯಕ್ತವಾಗಿದೆ. ಅಪಘಾತ ಸಂಭವಿಸಿದ ಒಂದು ತಿಂಗಳ ನಂತರ ಹೊರಬಂದ ವರದಿಗಳ ಪ್ರಕಾರ, ಕ್ಯಾಪ್ಟನ್ ಸುಮೀತ್ ಅವರು ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ವೈಯಕ್ತಿಕ ಜೀವನದ ಸಮಸ್ಯೆಗಳು ಮತ್ತು ವಿಚ್ಛೇದನದ ವದಂತಿಗಳು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದಿರಬಹುದು ಎಂದು ಶಂಕಿಸಲಾಗಿದೆ.

ಅಲ್ಲದೆ ದುರಂತದ ತನಿಖೆ ಕೈಗೊಂಡ ಅಮೆರಿಕದ ತಜ್ಞರ ತಂಡವೂ, ಯಂತ್ರದಲ್ಲಿ ದೋಷವಿರಲಿಲ್ಲ ಮತ್ತು ಇದೊಂದು ಉದ್ದೇಶಪೂರ್ವಕವಾದ ಕೃತ್ಯ ಎಂದು ಹೇಳಿರುವುದನ್ನು ಇಟಲಿ ಮಾಧ್ಯಮ ವರದಿ ಮಾಡಿದೆ. ಇನ್ನೂ ಎಎಐಬಿ ಪ್ರಾಥಮಿಕ ಮಾಹಿತಿಯಲ್ಲಿ ಒಬ್ಬ ಪೈಲಟ್‌ ಅನ್ನು ದೂರಲಾಗಿತ್ತು. ಇದನ್ನು ವಿರೋಧಿಸಿ ಪೈಲಟ್‌ಗಳ ಸಂಘ ವ್ಯಾಪಕ ಪ್ರತಿಭಟನೆಯನ್ನೂ ನಡೆಸಿತ್ತು. ಮಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದನ್ನು ಸುಮೀತ್ ಅವರ ತಂದೆಯೂ ಸರಾಸಗಟಾಗಿ ತಿರಸ್ಕರಿಸಿದ್ದಾರೆ. 

ಆದರೆ ಯಾವುದೇ ತೀರ್ಮಾನ ಅಂತಿಮಗೊಳ್ಳುವ ಮೊದಲು ರಾಜಕೀಯ ಮೌಲ್ಯಮಾಪನಕ್ಕೆ ಇದು ಒಳಪಡುತ್ತದೆ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನಿಡುವ ಸಾಧ್ಯತೆ ಇದೆ ಎಂದೂ ಇದು ವರದಿ ಮಾಡಿದೆ.