

ಆ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕವಾಕಿ ದುಡಿಯುತ್ತಿದ್ದವರು. ಆದರೆ ಇವರ ಮೇಲೆ 30 ವರ್ಷಗಳ ಹಿಂದೆ 20 ರೂಪಾಯಿ ಲಂಚ ತೆಗೆದುಕೊಂಡ ಆರೋಪ ಹೊರಿಸಲಾಗಿತ್ತು. ಈ ಪೊಲೀಸ್ ಪೇದೆ ತನಗೆ ಅಂಟಿದ ಕಳಂಕವನ್ನು ಹೋಗಲಾಡಿಸಲು 30 ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದರು. ಕೊನೆಗೂ ಅವರು ಈ ಪ್ರಕರಣದಲ್ಲಿ ಖುಲಾಸೆಗೊಂಡರು.
ಕೋರ್ಟ್ನಲ್ಲಿ ನಿರಪರಾಧಿ ಎಂದು ಸಾಬೀತಾದ ನಂತರ ಅವರು ಮೃತಪಟ್ಟಿದ್ದಾರೆ. ಬರೋಬ್ಬರಿ ವರ್ಷ ಕಳಂಕದಿಂದ ಮುಕ್ತರಾಗಬೇಕೆಂದು ಹೋರಾಡಿದ ಪೇದೆ ಕೊನೆಗೆ ನೆಮ್ಮದಿಯ ನಿದ್ರೆಗೆ ಜಾರಿದ್ದಾರೆ.
ಈ ಘಟನೆ ನಡೆದಿರುವುದು ಗುಜರಾತ್ನ ಅಹಮದಾಬಾದ್ನಲ್ಲಿ. ಗುಜರಾತ್ ಹೈಕೋರ್ಟ್ ಫೆ.4,2026 ರಂದು ಅಹಮದಾಬಾದ್ನ ವೆಜಲ್ಪುರ ಪೊಲೀಸ್ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಜಿ ಕಾನ್ಸ್ಟೇಬಲ್ ಬಾಬುಭಾಯಿ ಪ್ರಜಾಪತಿ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಲಾಗಿದ್ದ ಲಂಚ ಪ್ರಕರಣದಿಂದ ಸಂಪೂರ್ಣವಾಗಿ ಖುಲಾಸೆಗೊಳಿಸಿತು. ಈ ತೀರ್ಪಿನಿಂದ 1996 ರಿಂದ ಈ ಅಂಟಿದ ಕಳಂಕ ಕಳಚಿದೆ.
ನನ್ನ ಜೀವನದ ಮೇಲಿದ್ದ ಕಳಂಕವನ್ನು ನ್ಯಾಯಾಲಯ ತೊಲಗಿಸಿದೆ. ಈಗ ನನಗೆ ಮೋಕ್ಷ ಸಿಗಲಿ ಎಂದು ನಾನು ಬಯಸುತ್ತೇನೆ” ಎಂದು ತಮ್ಮ ವಕೀಲರನ್ನು ಭಾವನಾತ್ಮಕವಾಗಿ ಹೇಳಿಕೊಂಡಿದ್ದರು.
ಆದರೆ ಮನೆಗೆ ಹಿಂದಿರುಗಿದ ಮರುದಿನವೇ ಬಾಬುಭಾಯಿ ಪ್ರಜಾಪತಿ ನೈಸರ್ಗಿಕ ಕಾರಣಗಳಿಂದ ನಿಧನರಾದರು. ನ್ಯಾಯಕ್ಕಾಗಿ 30 ವರ್ಷಗಳ ಕಾಲ ನಡೆಸಿದ ಸುದೀರ್ಘ ಹೋರಾಟದ ನಂತರ ಸಿಕ್ಕ ನ್ಯಾಯವನ್ನು ಅವರು ಹೆಚ್ಚು ಕಾಲ ಅನುಭವಿಸಲು ಸಾಧ್ಯವಾಗಲಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.













