121
LIC: ಪಹಲ್ಗಾಂ ದಾಳಿ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಅವರ ಕ್ಲೈಂ ಸೆಟಲ್ಮೆಂಟ್ ನಿಯಮಗಳನ್ನು ಸಡಿಲಗೊಳಿಸಿರುವುದಾಗಿ ಎಲ್ಐಸಿ ಘೋಷಿಸಿದೆ.


‘ಪಾಲಿಸಿದಾರರ ಕಷ್ಟ ಕಡಿಮೆ ಮಾಡಲು ನಮ್ಮ ವಿಮಾ ಕಂಪನಿಯು ರಿಯಾಯಿತಿ ಘೋಷಿಸಿದೆ. ಪಾಲಿಸಿದಾರರು ಉಗ್ರದಾಳಿಯಲ್ಲಿ ಬಲಿಯಾದುದಕ್ಕೆ ಸಾಕ್ಷಿಯಾಗಿ ಮರಣ ಪ್ರಮಾಣ ಪತ್ರದ ಬದಲು, ಸರ್ಕಾರಿ ದಾಖಲೆಗಳಲ್ಲಿನ ಯಾವುದೇ ಪುರಾವೆಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನೀಡಿರುವ ಪರಿಹಾರ ಧನವನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದು’ ಎಂದು ಎಲ್ಐಸಿ ಸಿಇಒ ಸಿದ್ದಾರ್ಥ ಮೊಹಂತಿ ತಿಳಿಸಿದ್ದಾರೆ.
