Darshan Case: ಇತಿಹಾಸದಲ್ಲೇ ಮೊದಲು; ನಟ ದರ್ಶನ್‌ ಇರುವ ಠಾಣೆಯ ಸುತ್ತ ಶಾಮಿಯಾನ ಹಾಕಿ ಗೇಟ್‌ ಕ್ಲೋಸ್‌

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣೆ ಕುರಿತು ಇದೀಗ ಮಹತ್ವದ ಮಾಹಿತಿಯೊಂದು ವರದಿಯಾಗಿದೆ. ಆರೋಪಿಗಳನ್ನು ಮರೆಮಾಚಲು ಪೊಲೀಸರು ಮಾಧ್ಯಮಗಳಿಗೆ ದರ್ಶನ್‌ ಸೇರಿ ಇತರೆ ಆರೋಪಿಗಳು ಕಾರಣಿಸದಂತೆ ಪರದೆ ಕಟ್ಟಿದ್ದಾರೆ ಎಂದು ಹೇಳಲಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ಮೊದಲ ಬಾರಿ ಎನ್ನಲಾಗಿದೆ.

ಪವಿತ್ರಾ ಗೌಡ ಮಾಜಿ ಪತಿ ಸಂಜಯ್‌ ಸಿಂಗ್‌ ರಿಂದ ಶಾಕಿಂಗ್‌ ಹೇಳಿಕೆ ; ಕೊಲೆ ಕೃತ್ಯದ ಕುರಿತು ಏನಂದ್ರು?

ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆ ಕಾಂಪೌಂಡ್‌ ಸುತ್ತಲು ಪೊಲೀಸರು ಪರದೆ ಕಟ್ಟಿದ್ದು, ಜೊತೆಗೆ ಶಾಮೀಯಾನ ಕೂಡಾ ಹಾಕಿ ಕಟ್ಟಿದ್ದಾರೆ.

ಸಣ್ಣ ದೃಶ್ಯಾವಳಿ ಕೂಡಾ ಹೊರಗಡೆಗೆ ಹೋಗಬಾರದು ಹಾಗೆ ಶಾಮೀಯಾನ ಪರದೆ ಹಾಕಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ ಎಂದು ಕೇಳಿ ಬಂದಿದೆ.

ಪೊಲೀಸರು ಯಾರನ್ನು ರಕ್ಷಣೆ ಮಾಡಲು ಶಾಮಿಯಾನ ಹಾಕಿದ್ರು ಎಂದು ಸಾರ್ವಜನಿಕ ವಲಯದಲ್ಲಿ ಮಾತು ಶರುವಗಿದೆ. ದರ್ಶನ್‌ ರಕ್ಷಣೆಗೇನಾದರೂ ಪೊಲೀಸರು ತಯಾರಿ ಮಾಡ್ತಾ ಇದ್ದಾರಾ? ಎಂಬ ಪ್ರಶ್ನೆ ಕೂಡಾ ಎದ್ದಿದೆ. ಸಾರ್ವಜನಿಕರಿಗೂ ಎಂಟ್ರಿ ಇಲ್ಲದ ಹಾಗೆ ಗೇಟ್‌ ಕ್ಲೋಸ್‌ ಮಾಡಲಾಗಿರುವ ಕುರಿತು ವರದಿಯಾಗಿದೆ.

ಪೊಲೀಸರು ಶಾಮಿಯಾನ ಹಾಕಿ, ಗೇಟ್‌ ಕ್ಲೋಸ್‌ ಮಾಡಿ ಒಳಗಡೆ ಇದ್ದಾರೆ.

NEET 2024: ಒತ್ತಡಕ್ಕೆ ಮಣಿದ NTA, 1563 ವಿದ್ಯಾರ್ಥಿಗಳ ಗ್ರೇಸ್ ಮಾರ್ಕ್ ರದ್ದು – ಮರುಪರೀಕ್ಷೆ ಖಚಿತ !

Leave A Reply

Your email address will not be published.