Dharmasthala ಕ್ಕೆ ದೇವರ ದರ್ಶನಕ್ಕೆಂದು ಹೊರಟ ಕಾರು ನೀರಿಗೆ ಬಿತ್ತು, ಒಂದೇ ಕುಟುಂಬದ ಮೂವರ ದಾರುಣ ಸಾವು!!!

Tumkur news car falls into lake Three people died latest news

Tumkur: ದೇವರ ದರ್ಶನಕ್ಕೆಂದು ಹೊರಟಿದ್ದ ಕುಟುಂಬವೊಂದು ಸಾವಿಗೀಡಾದ ಘಟನೆಯೊಂದು ನಡೆದಿದೆ. ತುಮಕೂರಿನಲ್ಲಿ (Tumkur) ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೊರಟಿದ್ದವರ ಕಾರು ಕೆರೆಗೆ ಬಿದ್ದಿದ್ದು, ಒಂದೇ ಕುಟುಂಬ ಮೂವರು ನೀರುಪಾಲಾಗಿದ್ದಾರೆ. ನಾಲ್ವರಿದ್ದ ಕಾರಿನಲ್ಲಿ ಮೂವರು ಮೃತಪಟ್ಟರೆ ಒಬ್ಬರು ಪಾರಾಗಿದ್ದಾರೆ.

ಬೆಳಗಿನ ಜಾವ ಈ ಘಟನೆ ನಡೆದಿದ್ದು, ತುಮಕೂರಿನ ಶಿರಾ ತಾಲೂಕಿನ ಬುಕ್ಕಾಪಟ್ಟಣ ಸಮೀಪದ ರಾಮಲಿಂಗಾಪುರ ಬಳಿಯ ಕೆರೆಯಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಚಾಲಕನಿಗೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಪ್ರವೀಣ್‌ ಎಂಬುವವರು ಪಾರಾಗಿದ್ದು, ಅವರ ಪತ್ನಿ ಯಮುನಾ, ಮಾವ ದೊಡ್ಡಣ್ಣ, ಅತ್ತೆ ಸಣ್ಣಮ್ಮ ಮೃತಪಟ್ಟಿದ್ದಾರೆ.

ಇದನ್ನೂ ಓದಿ: UPSC ಯಿಂದ ಸಹಾಯಕ ಪ್ರಾಧ್ಯಾಪಕರ ನೇಮಕ! ಇಲ್ಲಿದೆ ಸಂಪೂರ್ಣ ವಿವರ!

Leave A Reply

Your email address will not be published.