Uttar Pradesh: ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಹಸಿ ಮೆಣಸಿನಕಾಯಿ ತುರುಕಿ ವಿಕೃತಿ !

Uttar Pradesh news two boys forced to drink urine tortured with chillies in UP

Uttar Pradesh: ಇಬ್ಬರು ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಹಸಿ ಮೆಣಸಿನಕಾಯಿ ತುರುಕಿ, ಬಾಲಕರಿಗೆ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಲ್ಲದೆ ಪತ್ತೆ ಮಾಡಲಾಗದಂತಹ ಚುಚ್ಚು ಮದ್ದನ್ನು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

10-15 ವರ್ಷದ ಈ ಇಬ್ಬರು ಬಾಲಕರು ಹಣ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕಟ್ಟಿ ಹಾಕಿ ಈ ಹಿಂಸಿಸಲಾಗಿದೆ. ಅಲ್ಲದೆ, ಬಾಲಕರಿಗೆ ಮೂತ್ರ ಕುಡಿಯುವಂತೆ, ಹಸಿರು ಮೆಣಸಿನಕಾಯಿ ತಿನ್ನುವಂತೆ ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಸಂಪೂರ್ಣ ವಿಕೃತಿಯ ವಿಡಿಯೋವನ್ನು ಮಾಡಿ ವ್ಯಾಟ್ಸ್ಆ್ಯಪ್ ಮೂಲಕ ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿ 6 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ಆರಂಭಗೊಂಡಿದೆ.

 

ಇದನ್ನೂ ಓದಿ: Vijayawada : ಮಹಿಳೆಯಿಂದ ಬೆತ್ತಲೆ ಪೂಜೆ – ಶಾಸಕನ ವಿರುದ್ಧ ಗಂಭೀರ ಆರೋಪ ಮಾಡಿ ಸೆಲ್ಫಿ ಫೋಟೋ ಶೇರ್ ಮಾಡಿದ ಮಹಿಳೆ !

Comments are closed.