Dhirendra shastri baba: ನಾ ಕೇಳೋ 3 ಪ್ರಶ್ನೆಗಳಿಗೆ ಉತ್ತರಿಸಿದ್ರೆ ಸಾಕು, 10 ಲಕ್ಷ ಕೊಡುವೆ; ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿಗೆ ಮಂಗಳೂರಿನ ವಿಚಾರವಾದಿ ಸವಾಲು!!

Mangalore news Rationalist Narendra Nayak challenges Bageshwar Dham baba God man Dhinendra shastri

Dhirendra shastri Baba: ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಸ್ವಯಂ ಘೋಷಿತ ದೇವಮಾನವರು(A self-proclaimed godman) ಅಲ್ಲಲ್ಲಿ ಹುಟ್ಟಿಕೊಂಡಿದ್ದಾರೆ. ಅವರಿಗೆ ಅವರದ್ದೇ ಆದ ಭಕ್ತಾಭಿಮಾನಿಗಳ ಪರಿವಾರವಿರುತ್ತದೆ. ಅಂತವರಲ್ಲಿ ಉತ್ತರ ಪ್ರದೇಶದ(Uttar Pradesh) ಧೀರೇಂದ್ರ ಶಾಸ್ತ್ರಿ ಬಾಬಾ(Dhirendra shastri baba) ಎಂಬ ದೇವಮಾನವರೂ ಕೂಡ ಒಬ್ಬರು. ಆದರೀಗ ಈ ಸ್ವಯಂ ಘೋಷಿತ ದೇವಮಾನವನಿಗೊಂದು ಸವಾಲು ಎದುರಾಗಿದ್ದು, ಇದನ್ನು ಸ್ವೀಕರಿ ಗೆದ್ದರೆ ಬರೋಬ್ಬರಿ 10 ಲಕ್ಷ ಬಹುಮಾನ ಕೂಡ ದೊರೆಯುತ್ತದೆ.

ಹೌದು, ತನ್ನ ಅಲೌಕಿಕ ಶಕ್ತಿಯಿಂದ ಭಕ್ತರ ಖಾಯಿಲೆಗಳನ್ನು ಶಮನ ಮಾಡುವೆ, ಭವಿಷ್ಯ – ಭೂತಗಳನ್ನು ಹೇಳುವೆ ಎಂದು ಹೇಳುತ್ತಿರುವ ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಅಕಾ ಬಾಗೇಶ್ವರ ಧಾಮ್ ಬಾಬಾ ತಾನು ಕೇಳುವ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ಹೇಳಿದಲ್ಲಿ‌ 10 ಲಕ್ಷ ರೂ. ಬಹುಮಾನವನ್ನು ನೀಡುವೆ ಎಂದು ಮಂಗಳೂರಿನ(Mangalore) ಖ್ಯಾತ ವಿಚಾರವಾದಿ ನರೇಂದ್ರ ನಾಯಕ್(Narendra nayak) ಸವಾಲೆಸೆದಿದ್ದಾರೆ.

ಅಂದಹಾಗೆ ಸ್ವಯಂ ಘೋಷಿತ ದೇವಮಾನವ ಧೀರೇಂದ್ರ ಶಾಸ್ತ್ರಿ ಬಾಬಾ ಅವರು ಇದೇ ಜೂನ್ 11 – 15 ರವರೆಗೆ ಬೆಂಗಳೂರಿಗೆ ಬರಲಿದ್ದು, ‘ಹನುಮಾನ್ ಕಥಾ'(Hanuman katha) ಕಾರ್ಯಕ್ರಮ ನಡೆಸಲಿದ್ದಾರೆ. ಈ ವೇಳೆ ಅವರು ಪವಾಡಗಳನ್ನು ಮಾಡಲಿದ್ದು, ಇದನ್ನು ತಾವು ಪರೀಕ್ಷಿಸುವುದಾಗಿ ನರೇಂದ್ರ ನಾಯಕ್ ಹೇಳಿದ್ದಾರೆ. ಅಲ್ಲದೆ ಬಾಬಾರವರ ಜನರ ಪೂರ್ವಾಪರಗಳನ್ನು‌ ತಿಳಿಸುವ, ರೋಗಗಳನ್ನು ಗುಣಪಡಿಸುವ ಶಕ್ತಿ ಮತ್ತು ಸರ್ವಜ್ಞತೆಯ ಸಾಮರ್ಥ್ಯವನ್ನು ನರೇಂದ್ರ ನಾಯಕ್ ಪರೀಕ್ಷಿಸಲು ಬಯಸಿರೋ ನರೇಂದ್ರ ನಾಯಕ್, ಈ ಪರೀಕ್ಷೆಯನ್ನು ಅವರ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮಾಡದೆ ಪ್ರತ್ಯೇಕ ಸ್ಥಳದಲ್ಲಿ ಮಾಡಲು ಬಯಸಿದ್ದಾರೆ.

ಇದರೊಂದಿಗೆ ತಾನು ಯಾವೆಲ್ಲಾ ಪರೀಕ್ಷೆಗಳನ್ನು ನಡೆಸುತ್ತೇನೆ ಎಂದು ಬಹಿರಂಗಪಡಿಸಿರೋ ನರೇಂದ್ರ ನಾಯಕ್ ಅವರು ‘ಪರೀಕ್ಷೆಯ ಸಂದರ್ಭ ಧೀರೇಂದ್ರ ಶಾಸ್ತ್ರಿ ಬಾಬಾ ನಾವು ಕರೆತರುವ ಐವರ ಬಗ್ಗೆ ಸರಿಯಾದ ವಿವರ ನೀಡಬೇಕು. ಈ ವಿವರಗಳು ಪ್ರಶ್ನೆಗಳ ರೂಪದಲ್ಲಿರುತ್ತವೆ ಎಂದಿದ್ದಾರೆ. ಅಲ್ಲದೆ ನಾವು ಆಯ್ಕೆಮಾಡಿರುವ ಓರ್ವ ವ್ಯಕ್ತಿಯ ನಿರ್ದಿಷ್ಟ ರೋಗ ಹಾಗೂ ವಿರೂಪತೆಯನ್ನು ಗುಣಪಡಿಸಬೇಕು. ಮೂರನೆಯದಾಗಿ ಸೀಲ್ಡ್ ಕವರ್​ನಲ್ಲಿದ್ದ ಕರೆನ್ಸಿ ನೋಟಿನ ಸಂಖ್ಯೆಯನ್ನು ಅವರ ತ್ರಿಕಾಲ ಜ್ಞಾನದ ಶಕ್ತಿಯಿಂದ ತಿಳಿಸಬೇಕು. ಅವರು ಸಂಖ್ಯೆಯನ್ನು ತಿಳಿಸಿದ ಬಳಿಕ ಪರಿಶೀಲಿಸಲು ಲಕೋಟೆ ತೆರೆಯಲಾಗುತ್ತದೆ. ಈ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ್ದಲ್ಲಿ 10 ಲಕ್ಷ ರೂ. ಗಳನ್ನು ನೀಡಲಾಗುತ್ತದೆ ಎಂದು ಸವಾಲು ಹಾಕಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿದ ನರೇಂದ್ರ ನಾಯಕ್ ದೇವಮಾನವ ಧೀರೇಂದ್ರ ಶಾಸ್ತ್ರಿ ಅಕಾ ಭಾಗೇಶ್ವರ ಧಾಮ್ ಬಾಬಾ ಸಣ್ಣ ಪ್ರಾಯದವನಾಗಿದ್ದಾನೆ. ಆತ ತನ್ನ ಪವಾಡಗಳಿಂದ ಉತ್ತರ ಪ್ರದೇಶದಲ್ಲಿ ಖ್ಯಾತನಾಗಿದ್ದಾನೆ. ಆದರೆ ಆತನ ಪವಾಡವನ್ನು ನಾನು ವೈಜ್ಞಾನಿಕವಾಗಿ ಪರೀಕ್ಷಿಸಬೇಕಾಗಿದೆ. ಈ ಕಾರಣದಿಂದ ಆತ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ಆತನ ಪರೀಕ್ಷೆ ನಡೆಸಲು ತಯಾರಿದ್ದೇನೆ. ಆದರೆ ಆತ ಬೆಂಗಳೂರಿನಲ್ಲಿ(Bangalore) ನಡೆಸುವ ಕಾರ್ಯಕ್ರಮದಲ್ಲಿ ಈ ಪರೀಕ್ಷೆ ನಡೆಸುವುದಿಲ್ಲ. ಆತನ ಅಂಧ ಭಕ್ತರಿಂದ ಗಲಾಟೆಗಳಾಗಬಹುದು. ಬೆಂಗಳೂರಿನ ಬೇರೆ ಯಾವುದಾದರೂ ಸಭಾಂಗಣದಲ್ಲಿ ಅಥವಾ ಟಿ ವಿ ಸ್ಟುಡಿಯೋ ದಲ್ಲಿ ಈ ಪರೀಕ್ಷೆ ನಡೆಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಅಂದಹಾಗೆ ನರೇಂದ್ರ ನಾಯಕ್ ಅವರು ಈವರೆಗೆ ಹಲವಾರು ಸವಾಲುಗಳನ್ನು ಹಾಕಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಜ್ಯೋತಿಷಿಗಳಿಗೆ ಸೇರಿದಂತೆ ಸಂದರ್ಭಕ್ಕನುಗುಣವಾಗಿ ಹಲವು ಸವಾಲುಗಳನ್ನು ಹಾಕಿದ್ದಾರೆ. ಆದರೆ ಈವರೆಗೆ ಯಾವ ಪವಾಡಪುರುಷರೂ, ದೇವಮಾನವರೂ, ಜ್ಯೋತಿಷಿಗಳು ಅವರ ಸವಾಲನ್ನು ಸ್ವೀಕರಿಸಿ ಗೆಲುವು ಸಾಧಿಸಿಲ್ಲ. ಆದರೆ ಧೀರೆಂದ್ರ ಶಾಸ್ತ್ರೀ ಬಾಬಾ ದೇವಮಾನವರು ಈ ಸವಾಲನ್ನು ಸ್ವೀಕರಿಸಿ, ಗೆಲುವು ಸಾಧಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: BJP- JDS: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ!! ನಡ್ಡಾ ಭೇಟಿಯಾದ ದೊಡ್ಡಗೌಡ್ರು!!

Leave A Reply

Your email address will not be published.