Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಈಗ ಎಲ್ಲಡೆ ಅಪಮೃತ್ಯ, ಜಾಗತಿಕವಾಗಿ ಪ್ರಮುಖ ವ್ಯಕ್ತಿಗಳ ತಲೆದಂಡವಾಗಲಿದೆ ಎಂದು ಕೋಡಿಮಠದ ಶ್ರೀಗಳು ಹೊಸ ಭವಿಷ್ಯವನ್ನು ನುಡಿದಿದ್ದಾರೆ.


ಮತೀಯ ಗಲಭೆ ದೇಶದಲ್ಲಿ ಹೆಚ್ಚಾಗಲಿದೆ, ಅಕಾಲ ಮೃತ್ಯವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ಆದರೆ, ಸಕಾಲಕ್ಕೆ ಈ ಬಾರಿ ಮಳೆಯಾಗಲಿದೆ, ಅಣೆಕಟ್ಟುಗಳು ತುಂಬಲಿವೆ ಎಂದು ಕೋಡಿಶ್ರೀಗಳು ಕಿಕ್ಕೇರಿಯಲ್ಲಿ ಭವಿಷ್ಯ ನುಡಿದಿದ್ದಾರೆ. ಮುಂದುವರಿಯುತ್ತಾ, ಅಗಸದಲ್ಲಿ ಮತ್ತು ಭೂಮಿಯಲ್ಲಿ ಅಪಘಾತಗಳು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ವಾಯು ಮತ್ತು ಗಾಳಿಯ ಆರ್ಭಟದ ಪ್ರಮಾಣದಲ್ಲಿ ವಿಪರೀತ ಎನ್ನುವ ಮಟ್ಟಿಗೆ ಹೆಚ್ಚಾಗಲಿದೆ, ಇದು ಅಲ್ಲಲ್ಲಿ ಉಸಿರುಗಟ್ಟಿಸುವ ವಾತಾವರಣವೂ ಇದರಿಂದಾಗಿ ಸೃಷ್ಟಿಯಾಗಬಹುದು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಏನಾದರೂ ಸೋಲಾಗುವ ಲಕ್ಷಣಗಳಿವೆ. ಮನುಷ್ಯನ ಆರೋಗ್ಯದ ಮೇಲೆ ಒಂದಲ್ಲಾ ಒಂದು ದುಷ್ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖ ವ್ಯಕ್ತಿಯೊಬ್ಬರ ತಲೆದಂಡವಾಗಲಿದೆ ಎಂದು ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ.
