Meghana Raj: ಬದುಕಿನ ದೊಡ್ಡ ಪ್ರಶ್ನೆಗೆ ಮೇಘನಾ ಕೊಟ್ರು ಉತ್ತರ! ಇದೇ ನೋಡಿ ಚಿರು ಪತ್ನಿಯ ಮುಂದಿನ ನಿರ್ಧಾರ!

Meghana Raj: ಸ್ಯಾಂಡಲ್ ವುಡ್ (Sandalwood)ಖ್ಯಾತ ನಟಿ ಮೇಘನಾ ರಾಜ್(Meghana Raj) ಅವರು ನಿನ್ನೆ ಕುತೂಹಲಕಾರಿ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದು, ಎಲ್ಲರೂ ಬಹಳ ದಿನಗಳಿಂದ ಕೇಳುವ ಹಾಗೂ ಜೀವನದ ಆ ಬಹುದೊಡ್ಡ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಕೊಡುವುದಾಗಿ ಹೇಳಿದ್ದರು. ಮೇಘನಾ ಅವರು ಹೀಗೆ ಹೇಳುತ್ತಿದ್ದಂತೆ ಅಭಿಮಾನಿಗಳೆಲ್ಲಾ ಅಂತದ್ದೇನಿರಬಹುದು ಎಂದು ಕಾತರದಿಂದ ಕಾಯುತ್ತಿದ್ದರು. ಸದ್ಯ ಮೇಘನಾ ರಾಜ್‌ ತಮ್ಮ ಜೀವನದ ಆ ದೊಡ್ಡ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹೌದು, ಮೇಘನಾ ರಾಜ್ ಏನು ಹೇಳ್ತಾರೆ ಎಂದು ಎಲ್ಲರೂ ಕಾಯುತ್ತಿದ್ದರು. ಈಗ ಹೊಸ ಸಿನಿಮಾ ಅನೌನ್ಸ್ ಮಾಡುವ ಮೂಲಕ ಮೇಘನಾ ತನ್ನ ಜೀವನದ ಅತೀ ದೊಡ್ಡ ಪ್ರಶ್ನೆಗೆ ಉತ್ತರಿಸಿದ್ದಾರೆ. ಇಂದು ಬೆಳಗ್ಗೆ ಈ ಗುಟ್ಟನ್ನು ಬಿಟ್ಟುಕೊಡುವ ಮೂಲಕ ಮೇಘನಾ ಅವರು ಎಲ್ಲರ ಕುತೂಹಲವನ್ನು ತಣಿಸಿದ್ದಾರೆ. ಅಂದಹಾಗೆ ಮೇಘನಾ ‘ತತ್ಸಮ ತದ್ಭವ'(Tatsama Tadbhava) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು ಪೋಸ್ಟರ್(Poster)ಕೂಡ ರಿಲೀಸ್ ಮಾಡಲಾಗಿದೆ.

ರಿಲೀಸ್ ಆದ ಪೋಸ್ಟರ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ರಕ್ತಸಿಕ್ತ ಕೈಗಳು ಮೇಘನಾ ರಾಜ್ ಅವರ ಬಾಯಿಯನ್ನು ಬಲಬಂತವಾಗಿ ಮುಚ್ಚಲಾಗಿದೆ. ಒಟ್ಟಿನಲ್ಲಿ ಕುತೂಹಲ ಮೂಡಿಸಿರುವ ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ಮೇಘನಾ ಮತ್ತು ತಂಡ ಕಾತರ ಹಾಗೆ ಕಾಯ್ದಿರಿಸಿದ್ದಾರೆ. ಅಂದಹಾಗೆ ತ್ಸಮ ತದ್ಭವ ಸಿನಿಮಾಗೆ ವಿಶಾಲ್ ಆತ್ರೆಯ(Vishal Atreya) ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಎಂದರೆ ನಿರ್ದೇಶಕ ಪನ್ನಗಾಭರಣ(Pannagaabarana) ನಿರ್ಮಾಣದಲ್ಲಿ ಮೇಘನಾ ರಾಜ್ ಸಿನಿಮಾ ಮೂಡಿ ಬರುತ್ತಿದೆ. ಕೆಆರ್ ಜಿ(KRG) ಈ ಸಿನಿಮಾವನ್ನ ವರ್ಲ್ಡ್ ವೈಡ್ ಬಿಡುಗಡೆ ಮಾಡುತ್ತಿದ್ದಾರೆ. ಅಂದಹಾಗೆ ಈ ಸಿನಿಮಾ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ದಕ್ಷಿಣ ಭಾರತದ(South India)ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ.

ನಿನ್ನೆ(18, ಫೆಬ್ರವರಿ) ಮೇಘನಾ ಅವರು ಜೀವನದ ಬಹುಮುಖ್ಯವಾದ ವಿಷಯವೊಂದನ್ನು ಬಹಿರಂಗಪಡಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಅದರಲ್ಲಿ ‘2020, ಅದು ಭಾನುವಾರವಾಗಿತ್ತು ನನ್ನ ವಿಚಾರದಲ್ಲಿ ತೀವ್ರವಾದ ಬದಲಾವಣೆಯಾದವು, ಅಂದಿನಿಂದ, ಒಂದು ಸ್ಪಷ್ಟ ವಿಷಯದ ಬಗ್ಗೆ ನನ್ನನ್ನು ಕೇಳಲಾಯಿತು. ಆ ಒಂದು ಪ್ರಶ್ನೆಗೆ ನಾಳೆ, ಭಾನುವಾರ 10.30ಕ್ಕೆ ಬೆಳಗ್ಗೆ, ಅಂತಿಮವಾಗಿ ಉತ್ತರಿಸಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದರು.

ಮೇಘನಾ ರಾಜ್ ಮತ್ತು ಚಿರಂಜೀವಿ(Chiranjeevi) ಸರ್ಜಾ ‘ಆಟಗಾರ'(Atagara) ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ, ಕುಟುಂಬದವರನ್ನು ಒಪ್ಪಿಗೆ ಮದುವೆ ಆಗಿದ್ದರು ಈ ಜೋಡಿ. ಆದರೆ ದುರ್ವಿಧಿ ಎಂಬಂತೆ 2020 ರ ಜೂನ್ 7ರಂದು ಚಿರು ಹೃದಯಾಘಾತದಿಂದ ಅಗಲಿದರು. ಆಗ ಮೇಘನಾ ಗರ್ಭಿಣಿಯಾಗಿದ್ದರು. ಕೆಲವೇ ತಿಂಗಳಲ್ಲಿ ಮೇಘನಾ ಬಾಳಲ್ಲಿ ಪುತ್ರ ರಾಯನ್ ಸರ್ಜಾ ಬೆಳಕಾಗಿ ಬಂದರು. ಮಗನನ್ನು ನೋಡುತ್ತಾ ನೋವನ್ನು ಮರೆಯುತ್ತಿರುವ ಮೇಘನಾ ಈಗ ಮತ್ತೆ ಸಿನಿಮಾ ಮಾಡಲು ಸಜ್ಜಾಗಿರುವುದು ಸಂತಸದ ವಿಚಾರವಾಗಿದೆ.

Leave A Reply

Your email address will not be published.