ಲವ್ ಜಿಹಾದ್ ನ ಫ್ಯಾಕ್ಟರಿ ಆಗ್ತಿದ್ಯಾ ಬೆಳ್ತಂಗಡಿಯ ಈ ಕಾಲೇಜು ? ಮೊನ್ನೆ ರಾಜಾ ರಸ್ತೆಯಲ್ಲಿ ನಡೆದಿತ್ತು ಹಿಂದೂ ಹುಡುಗಿಯ ಹಗ್ ಮತ್ತು ಕಿಸ್ !!!

ಬೆಳ್ತಂಗಡಿಯ ಪ್ರತಿಷ್ಠಿತ ಕಾಲೇಜು ಲವ್ ಜಿಹಾದ್ ನ ಟೆಸ್ಟಿಂಗ್ ಸೆಂಟರ್ ಆಗ್ತಿದ್ಯಾ ? ಹಾಗಂತ ಒಂದು ಬಲವಾದ ಗುಮಾನಿ, ಸ್ಪಷ್ಟವಾದ ಸಾಕ್ಸ್ಯಗಳು ಈಗ ಲಭ್ಯವಾಗುತ್ತಿದ್ದು ಕಾಲೇಜಿನ ಮೇಲೆ ಹಲವು ದೂರುಗಳು ಕೇಳಿಬರುತ್ತಿವೆ. ಖುದ್ದು ಬೆಳ್ತಂಗಡಿಯ ಮಾಜಿ ಶಾಸಕರೊಬ್ಬರ ಡ್ರೈವರ್ ಓರ್ವ ಹಿಂದೂ ಹುಡುಗಿಯರಿಗೆ ಕಂಟಕ ಆಗುತ್ತಿರುವ ದೂರುಗಳು ಹಲವು ದಿನಗಳಿಂದ ಬಂದಿತ್ತು. ಆದರೆ ಇದೀಗ ಈ ಸುದ್ದಿಗಳು ಮತ್ತಷ್ಟು ಬಿರುಸಾಗಿ ಕೇಳಿ ಬರುತ್ತಿವೆ. ಇದರ ಮಧ್ಯೆ ಬೆಳ್ತಂಗಡಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಲವ್ ಜಿಹಾದ್ ನ ಲ್ಯಾಬ್ ದೊಡ್ಡದಾಗಿ ತಯಾರಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಲವ್ ಜಿಹಾದ್ ಫ್ಯಾಕ್ಟರಿ ಆಗತ್ತಾ ಗುರುದೇವ ಕಾಲೇಜು ಎಂದು ಕೇಳುತ್ತಿದ್ದಾರೆ ವಿದ್ಯೆಗೆ ಮಾತ್ರ ಇರೋದು ಶಾಲೆ ಕಾಲೇಜುಗಳು ಎಂದು ನಂಬಿರುವ ಪ್ರಜ್ಞಾವಂತರು.

ಬೆಳ್ತಂಗಡಿ ತಾಲೂಕಿನ ಗುರುದೇವ ಕಾಲೇಜು ಮಾಜಿ ಶಾಸಕ ಮಾನ್ಯ ವಸಂತ ಬಂಗೇರ ಅವರ ಯಜಮಾನಿಕೆಯಲ್ಲಿ ನಡೆಯುತ್ತಿದೆ. ಬೆಳ್ತಂಗಡಿಯ ಪಾಲಿನ ಮತ್ತು ರಾಜ್ಯದ ಬಹುದೊಡ್ಡ ನಾಯಕರಾಗಿರುವ ಹಿರಿಯರಾದ ಮಾನ್ಯ ವಸಂತ ಬಂಗೇರ ಅವರ ಕಾಲೇಜಿನಲ್ಲಿ ಇಂತಹಾ ಹಲವು ಘಟನೆಗಳು ಕೇಳಿಬರುತ್ತಿರುವುದು ಬೇಸರದ ಸಂಗತಿಯೇ ಸರಿ.

ನಿನ್ನೆ ತಾನೇ ಅಲ್ಲಿನ ಕಾಲೇಜಿನ ದ್ವಿತೀಯ ಪಿಯುಸಿ ಹುಡುಗಿಯೊಬ್ಬಳನ್ನು ರಾಜಾ ರಸ್ತೆಯಲ್ಲಿ ಮುಸ್ಲಿಂ ಹುಡುಗನೊಬ್ಬ ಹಗ್ ಮಾಡಿ ಕಿಸ್ ಹೊಡೆದಿದ್ದ. ಅದನ್ನು ಕಾಲೇಜಿನ ಇತರ ಹುಡುಗರು ನೋಡಿದ್ದರು. ನಂತರ ಅದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸುದ್ದಿ ತಿಳಿದ ಸ್ಥಳೀಯ ಯುವಕರು ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ. ಆಗ ಹುಡುಗಿಯ ಪೋಷಕರನ್ನೂ ಕರೆತರಲಾಗಿದೆ. ಹುಡುಗಿ ಹೊರ ಊರಿನವಳಾಗಿದ್ದು ಆಕೆಯನ್ನು ಮುಖ್ಯರಸ್ತೆಯ ಬದಿಯಲ್ಲಿ ಅಶ್ವಿರ್ ಎನ್ನುವ ಹುಡುಗ ಹಗ್ ಮಾಡಿದ್ದ. ಅದನ್ನು ಹುಡುಗನೇ ಒಪ್ಪಿಕೊಂಡ ಆಡಿಯೊಗಳು ಈಗ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಆಶಿಕ್ ಗೆ ಓದಿನಲ್ಲಿ ಇಂಟ್ರೆಸ್ಟ್ ಇಲ್ಲ. ಆತ ಮಹಾ  ‘ ಮೂಸೆಲ ಮತ್ತು ಓಂಗೆಲ ‘ ಎನ್ನುವುದು ಆತನನ್ನು ತಿಳಿದಿರುವ ಎಲ್ಲರಿಗೂ ಗೊತ್ತಿರುವ ವಿಚಾರ. ಆತ ನಡು ಮಧ್ಯಾಹ್ನ ಅಪ್ಪುಗೆ ಮಾಡಲು ಹೊರಡಲು ಆತನಿಗೆ ಧೈರ್ಯ ಕೊಟ್ಟದ್ದು ಯಾರು ? ಇಲ್ಲಿಯತನಕ ಇಂತಹ ಹಲವು ಘಟನೆಗಳಿಗೆ ಆಡಳಿತ ಮಂಡಳಿ ಸ್ಪಂದಿಸದೇ ಇದ್ದುದೇ ಕಾರಣ ಅಲ್ಲವೇ ?

ಇದೇ ಅಶ್ವಿರ್ ಈ ಹಿಂದೆಯೂ ಹಿಂದೂ ಹುಡುಗಿಯೊಬ್ಬಳಿಗೆ ಮೆಸೇಜು ಮಾಡಿದ್ದನ್ನು ಆಕೆ ತನ್ನ ಕ್ಲಾಸಿನ ಹುಡುಗನಲ್ಲಿ ಹೇಳಿದ್ದಳು. ಆಗ ಆ ಕೇಸು ಖುದ್ದು ವಸಂತ ಬಂಗೇರ ಅವರ ಬಳಿಗೆ ಹೋಗಿತ್ತು. ಆಗ ಅವರು ಹುಡುಗನನ್ನು ಕರೆದು ಬುದ್ಧಿ ಹೇಳುವ ಬದಲು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು ಅನುಮಾನದ ಮೇಲೆ ಹಿಂದೂ ಹುಡುಗನನ್ನು ಕರೆಸಿ ಕೈ ಎತ್ತುವ ತನಕ ಹೋಗಿದ್ದರು. ಇದು ಗುರುದೇವ ಕಾಲೇಜಿನ ಸ್ಥಿತಿಗತಿ. ಅಲ್ಲಿ ವ್ಯಕ್ತಿಯ ‘ಧರ್ಮ ‘ ನೋಡಿ ನ್ಯಾಯ ತೀರ್ಮಾನ ಆಗುತ್ತದೆ ಅನ್ನುವುದು ಇದೀಗ ಎಲ್ಲರಿಗೂ ಗೊತ್ತಿರುವ ವಿಷಯ.

ಇದು ಈ ಕಾಲೇಜಿನಲ್ಲಿ ಹೊಸತಲ್ಲ. ಅಲ್ಲಿ ಅದೆಷ್ಟೋ ಮುಸ್ಲಿಂ ಪುಂಡು ಹುಡುಗರ ಆರ್ಭಟ ತುಂಬಾ ಅತಿರೇಕಕ್ಕೆ ಹೋಗಿ ನಿಂತಿದೆ. ಇಂಥವರಿಂದ ಉಳಿದವರಿಗೂ ಕೆಟ್ಟ ಹೆಸರು ಬರುತ್ತಿದೆ. ಆಡಳಿತ ಮಂಡಳಿ ಏನೂ ಮಾಡಲಾಗದೆ ಸುಮ್ಮನೆ ಕುಳಿತಿದೆ. ರಾಜಕೀಯ ಕಾರಣಕ್ಕೆ ಇರಬಹುದು :ಒಂದು ರೀತಿಯಲ್ಲಿ ಗುರುದೇವ ಕಾಲೇಜ್ ಲವ್ ಜಿಹಾದ್ ನ ಟೆಸ್ಟಿಂಗ್ ಸೆಂಟರ್ ಇದ್ದಂತೆ. ಅದು ಲವ್ ಜಿಹಾದಿ ಹುಡುಗರ ಫ್ಯಾಕ್ಟರಿ ಥರ ಬೆಳೆಯುತ್ತಿದೆ ಎನ್ನುವುದು ಸಾರ್ವಜನಿಕರ ದೂರು.

ಇದೀಗ ಬಂದ ಆಘಾತಕಾರಿ ಸುದ್ದಿ ಏನೆಂದರೆ ಆ ಹುಡುಗಿಯನ್ನು ಡಿಬಾರ್ ಮಾಡಿ ಕಳಿಸಲಾಗಿದೆ. ಆಕೆಯನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆ ಹುಡುಗನನ್ನು ಮುಟ್ಟುವ ಧಮ್ ಖುದ್ದು ವಸಂತ ಬಂಗೇರರಿಗೆ ಕೂಡಾ ಇಲ್ಲದಾಗಿದೆ. ಆತನಿನ್ನೂ ಕಾಲೇಜಿನಲ್ಲಿ ಇದ್ದಾನೆ. ಇದರಲ್ಲೇ ಕಾಲೇಜಿನ ಆಡಳಿತ ಮಂಡಳಿಯ ಇಬ್ಬಗೆಯ ನೀತಿ ಗೊತ್ತಾಗುತ್ತಿದೆ. ಅದರ ಮೇಲೇ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರತಿಭಟನೆಗಳು ಏಳುತ್ತಿವೆ. ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಯಾಕ್ ಸ್ವಾಮೀ ಅಂತ ಕೂಗು ಎದ್ದಿದೆ.

ಇಲ್ಲಿ ಇದೆಲ್ಲ ಹೊಸದಲ್ಲ, ಮೊನ್ನೆ ಬಸ್ ಸ್ಟಾಂಡಿನಲ್ಲಿ ಇಂತಹ ಒಬ್ಬ ಹುಡುಗ ಹಿಂದೂ ಹುಡುಗಿಗೆ ತೊಂದರೆ ಕೊಡಲು ಹೋದಾಗ ಸಿಕ್ಕಿ ಬಿದ್ದಿದ್ದ. ಆಗ ಸ್ತಳೀಯ ಹುಡುಗರು ಹೋಗಿ ಮಾಂಜಾ ತೋರಿಸಿ ಬಂದಿದ್ದರು. ಇಂತಹಾ ಹಲವು ಪ್ರಕರಣಗಳು ಕಿವಿಗೆ ಬಿದ್ದಿದ್ದರೂ ಅದನ್ನು ಸುದ್ದಿ ಮಾಡಲು ನಾವು ಹೋಗಿರಲಿಲ್ಲ, ಕಾರಣ ಶ್ರೀಮಾನ್ ವಸಂತ ಬಂಗೇರ ಅವರು ಇದಕ್ಕೆಲ್ಲಾ ಅವಕಾಶ ಕೊಡಲಾರರು ಮತ್ತು ಇಂತಹ ಅಪಸವ್ಯಗಳನ್ನು ಅವರು ತಡೆಯಬಲ್ಲರು ಎಂಬ ಕಾರಣದಿಂದ. ಆದರೆ ಈಗ ಇಂತಹ ಘಟನೆಗಳು ಜೋರಾಗಿ ಮತ್ತು ಹೆಚ್ಚಾಗುತ್ತಿರುವ ಕಾರಣ ಬರೆಯಲೇ ಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ಶಾಲಾ ಮುಖ್ಯಸ್ಥರು ಜಾಗೃತರಾಗಿ ಪುಂಡರನ್ನು ಮಟ್ಟ ಹಾಕಲಿ, ಯಾವುದೇ ಹೆಣ್ಣು ತನ್ನ ಮಾನ ಪ್ರಾಣ ಕಳೆದುಕೊಳ್ಳದಿರಲಿ ಎನ್ನುವುದಷ್ಟೇ ಇಲ್ಲಿನ ಆಶಯ.

Leave A Reply

Your email address will not be published.