ಸಿಗರೇಟ್ ಸೇದಲು ಬಿಡಲಿಲ್ಲವೆಂದು ಈ ವ್ಯಕ್ತಿ ಮಾಡಿದ್ದು ಎಂತಹ ಕೆಲಸ ಗೊತ್ತಾ!?

ಕೋಪ ಎನ್ನುವುದು ಯಾವೊಬ್ಬ ಮನುಷ್ಯನ ಕರಾಳ ಮುಖ ಕೂಡ ತೋರಿಸಲು ಹಿಂದೇಟು ಹಾಕುವುದಿಲ್ಲ. ಆ ಸಮಯದಲ್ಲಿ ಆತ ಮನುಷ್ಯನಾಗಿಯೇ ಉಳಿಯುವುದು ಕಷ್ಟ ಎಂದೇ ಹೇಳಬಹುದು. ಇದಕ್ಕೆ ಉದಾಹರಣೆಯಾಗಿ ನಿಂತಿದೆ ಇಲ್ಲೊಂದು ಕಡೆ ನಡೆದ ಘಟನೆ. ಹೌದು. ಇಲ್ಲೊಬ್ಬ ಸಿಗರೇಟ್ ಸೇದಲು ಬಿಡದ ಕಾರಣ ಕೋಪಗೊಂಡು ಯಾವ ಕೆಲಸ ಮಾಡಿದ್ದಾನೆ ಎಂಬುದನ್ನು ನೀವೇ ನೋಡಿ.

ಇಂತಹದೊಂದು ಘಟನೆ ಗುರುಗ್ರಾಮ್‌ನ ಅಂಗಡಿಯೊಂದರಲ್ಲಿ ನಡೆದಿದ್ದು, ಸಿಗರೇಟ್ ಸೇದಲು ಬಿಡದ ಕಾರಣ ಅಪರಿಚಿತ ವ್ಯಕ್ತಿಯೊಬ್ಬ ಕಾರ್ಮಿಕನ ಮೇಲೆಯೇ ಗುಂಡು ಹಾರಿಸಿರುವ ಆಘಾತಕಾರಿ ಘಟನೆ ನಡೆದಿದೆ.

ಗುಂಡು ಹಾರಿಸಿರುವ ವ್ಯಕ್ತಿ ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಕೈಯಲ್ಲಿ ಸಿಗರೇಟ್‌ನೊಂದಿಗೆ ಸೆಕ್ಟರ್ 22 ರಲ್ಲಿ 24 ಗಂಟೆಗಳ ಕನ್ವೀನಿಯನ್ಸ್ ಸ್ಟೋರ್‌ಗೆ ಪ್ರವೇಶಿಸಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಒಳಗೆ ಧೂಮಪಾನ ಮಾಡದಂತೆ ವಿನಂತಿಸಿದಾಗ ಅವರು ಸಿಬ್ಬಂದಿಯನ್ನು ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ, ಅಂಗಡಿಯ ಹೊರಗೆ ನಿಲ್ಲಿಸಿದ್ದ ತನ್ನ ವಾಹನದಲ್ಲಿ ಖರೀದಿಸಿದ ವಸ್ತುಗಳನ್ನು ಇರಿಸಲು ಯಾರಾದರೂ ತನ್ನೊಂದಿಗೆ ಬರುವಂತೆ ಒತ್ತಾಯಿಸಿದನು ಎಂದು ಭದ್ರತಾ ವ್ಯವಸ್ಥಾಪಕ ರೂಪೇಂದ್ರ ಸಿಂಗ್ ಹೇಳಿದರು.

ಬಳಿಕ ಸರಕುಗಳನ್ನು ವಾಹನದಲ್ಲಿ ಇರಿಸಿದಾಗ, ವ್ಯಕ್ತಿ ಇದ್ದಕ್ಕಿದ್ದಂತೆ ತನ್ನ ಪಿಸ್ತೂಲ್ ಅನ್ನು ಲೋಡ್ ಮಾಡಲು ಪ್ರಾರಂಭಿಸಿದನು. ನಂತರ ಇದ್ದಕ್ಕಿದ್ದಂತೆ ಅಂಗಡಿಯ ಸಹವರ್ತಿ ಆಶಿಶ್ ಮೇಲೆ ಗುಂಡು ಹಾರಿಸಿದನು, ಆದರೆ ಪುಣ್ಯ ಎಂಬಂತೆ ಅವನು ಸ್ವಲ್ಪದರಲ್ಲೇ ಪಾರಾಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಸಂಪೂರ್ಣ ಕೃತ್ಯ ಸೆರೆಯಾಗಿದ್ದು, ವಾಹನದ ನೋಂದಣಿ ಸಂಖ್ಯೆಯ ಸಹಾಯದಿಂದ ಶಂಕಿತನನ್ನು ಗುರುತಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ತನಿಖಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

Leave A Reply

Your email address will not be published.