Home News ಭಟ್ಕಳ :ಆರು ಜನ ಮುಸುಕುಧಾರಿಗಳಿಂದ ವೆಬ್ ಸೈಟ್ ಮಾಧ್ಯಮವೊಂದರ ಸಂಪಾದಕನ ಕೊಲೆಯತ್ನ!! ಕಬ್ಬಿಣದ ರಾಡ್ ನಿಂದ...

ಭಟ್ಕಳ :ಆರು ಜನ ಮುಸುಕುಧಾರಿಗಳಿಂದ ವೆಬ್ ಸೈಟ್ ಮಾಧ್ಯಮವೊಂದರ ಸಂಪಾದಕನ ಕೊಲೆಯತ್ನ!! ಕಬ್ಬಿಣದ ರಾಡ್ ನಿಂದ ನಡೆಸಿದ ಹಲ್ಲೆ-ಗಾಯಾಳು ಗಂಭೀರ

Hindu neighbor gifts plot of land

Hindu neighbour gifts land to Muslim journalist

ಭಟ್ಕಳ: ಇಲ್ಲಿನ ಖಾಸಗಿ ವೆಬ್ ಸೈಟ್ ಮಾಧ್ಯಮ ಸಂಸ್ಥೆಯೊಂದರ ಸಂಪಾದಕ ಅರ್ಜುನ್ ಮಲ್ಯ ರ ಮೇಲೆ ಮುಸುಕುಧಾರಿಗಳ ತಂಡವೊಂದು ದಾಳಿ ನಡೆಸಿ ತೀವ್ರವಾಗಿ ಹಲ್ಲೆಗೈದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಅರ್ಜುನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರ:ಭಟ್ಕಳ ತಾಲೂಕಿನ ಬೆಳಕೆ ಎಂಬಲ್ಲಿ ಘಟನೆ ನಡೆದಿದ್ದು, ತನ್ನ ಆಫೀಸ್ ಮುಗಿಸಿ ಮನೆಗೆ ತೆರಳುತಿದ್ದ ಅರ್ಜುನ್ ಮೇಲೆ ಆರು ಜನ ಮುಸುಕುಧಾರಿಗಳು ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಯ ತುಂಡುಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದು,ಬೊಬ್ಬೆ ಕೇಳಿ ಸ್ಥಳೀಯರು ಆಗಮಿಸುವುದನ್ನು ಕಂಡ ಹಲ್ಲೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಗಂಭೀರ ಗಾಯಗೊಂಡ ಅರ್ಜುನ್ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಥಮ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಗಿದೆ. ಹಲ್ಲೆಯಿಂದ ಅರ್ಜುನ್ ಕೈ ಮುರಿತಕ್ಕೊಳಗಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.