ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ : ಬೆಳ್ತಂಗಡಿಯಲ್ಲಿ ವಿಜಯೋತ್ಸವ 

Beltangadi: ದೆಹಲಿ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲದ ವತಿಯಿಂದ ಬೆಳ್ತಂಗಡಿ ಬಸ್‌ ನಿಲ್ದಾಣದ ಬಳಿಯಲ್ಲಿ ಫೆ.8ರಂದು ವಿಜಯೋತ್ಸವ ಆಚರಿಸಲಾಯಿತು.

ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ, ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭ ವಿಧಾನ ಪರಿಷತ್‌ ಶಾಸಕ ಪ್ರತಾಪಸಿಂಹ ನಾಯಕ್‌, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್‌, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ ಎಂ. ಪಾರೆಂಕಿ, ಜಯಾನಂದ ಗೌಡ ಪ್ರಜ್ವಲ್, ಪ್ರಮುಖರಾದ ಸೀತಾರಾಮ ಬೆಳಾಲು, ಸದಾನಂದ ಪೂಜಾರಿ ಉಂಗಿಲಬೈಲು, ಸುಂದರ ಹೆಗ್ಡೆ ವೇಣೂರು, ಮೋಹನ್‌ ಅಂಡಿಂಜೆ, ಚೆನ್ನಕೇಶವ ಮುಂಡಾಜೆ, ಶರತ್‌ಕುಮಾ‌ರ್ ಶೆಟ್ಟಿ, ಅರವಿಂದ ಲಾಯಿಲ, ಮಾಧವ ಶಿರ್ಲಾಲು, ಪ್ರಭಾಕರ ಆಚಾರ್ಯ ಸವಣಾಲು, ಚಂದ್ರರಾಜ್ ಮೇಲಂತಬೆಟ್ಟು, ಮಹೇಶ್ ಕೋಟ್ಯಾನ್, ಮಂಜುನಾಥ ಸಾಲ್ಯಾನ್, ಯಶವಂತ ಡೆಚ್ಚಾರ್, ರೂಪ ಮಡಂತ್ಯಾರು, ಶೋಭಾ ಕುಲಾಲ್ ಬಳೆಂಜ,ಜಯಾನಂದ ಕಲ್ಲಾಪು, ಜಗದೀಶ್ ಕನ್ನಾಜೆ, ಅಭಿಜಿತ್‌ ಜೈನ್ ನಾರಾವಿ, ನೇಮಯ್ಯ ಕುಲಾಲ್ ವೇಣೂರು, ಕೊರಗಪ್ಪ ಗೌಡ ಚಾರ್ಮಾಡಿ, ಈಶ್ವರ ಭೈರ, ಪ್ರಭಾಕರ ಆಚಾರ್ಯ, ಉಮೇಶ್‌ ಕುಲಾಲ್ ಜಿ.ಕೆರೆ, ವಸಂತಿ ಮಚ್ಚಿನ, ಉಮೇಶ್ ನಡ್ತಿಕಲ್, ಲಕ್ಷ್ಮೀಕಾಂತ ಶೆಟ್ಟಿ, ಆಶಾ ಸಲ್ದಾನ, ಹರೀಶ್ ಕಳೆಂಜ ಮೊದಲಾದವರು ಉಪಸ್ಥಿತರಿದ್ದರು.

Comments are closed.