Ayodhya: ಬಾಲ ರಾಮನಿಗೆ ಇಂದು ಸೂರ್ಯ ತಿಲಕ
![Ayodhya](https://hosakannada.com/wp-content/uploads/2024/04/IMG-20240417-WA0010-jpg.webp)
Ayodhya: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ತಲೆಯತ್ತಿದ ಬಳಿಕ ಮೊದಲ ರಾಮನವಮಿ ಉತ್ಸವಕ್ಕೆ ಐತಿಹಾಸಿಕ ನಗರಿ ಸಜ್ಜಾಗಿದೆ. ಬುಧವಾರ (ಏ.17) ಬಾಲ ರಾಮನ ಮೂರ್ತಿಯ ಹಣೆಯ ಮೇಲೆ ಮಧ್ಯಾಹ್ನ 12.16ರ ಸುಮಾರಿಗೆ 5 ನಿಮಿಷಗಳ ಕಾಲ ‘ಸೂರ್ಯ ತಿಲಕ’ ಮೂಡಲಿದೆ.
![](https://hosakannada.com/wp-content/uploads/2024/07/First.jpeg)
ಈ ಸಂಭ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿದೆ. 25 ಲಕ್ಷ ಭಕ್ತರು ರಾಮ ಲಲ್ಲಾನ ದರ್ಶನ ಪಡೆಯುವ ನಿರೀಕ್ಷೆ ಇದೆ.
![](https://hosakannada.com/wp-content/uploads/2024/07/Middle.jpeg)
ಮಂದಿರ ಪ್ರಾಂಗಣದ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಅಳವಡಿಸಿರುವ ಮಸೂರಗಳು ಸೂರ್ಯನ ಕಿರಣವು ಬಾಲರಾಮನ ಮೂರ್ತಿಯ ಹಣೆಯನ್ನು ತಿಲಕ ರೂಪದಂತೆ ಸ್ಪರ್ಶಿಸಲಿದೆ. ವಿಗ್ರಹವು ಸೂರ್ಯನ ಶಾಖ ತಡೆದು ಕೊಳ್ಳಲು ‘ಆಪ್ರೊಮೆಕಾನಿಕಲ್’ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಕ್ಷಣವನ್ನು ಭಕ್ತರು ಕಣ್ಣುಂಬಿಕೊಳ್ಳಲು ಮಂದಿರದ ಸುತ್ತಮುತ್ತ 100 ಎಲ್ಇಡಿ ಪರದೆಗಳನ್ನು ಅಳವಡಿಸಲಾಗಿದೆ.