Dakshina Kannada (Bantwala): ಅನಾರೋಗ್ಯ ಕಾರಣ; ಚಿಕಿತ್ಸೆ ಫಲಕಾರಿಯಾಗದೆ 2ನೇ ತರಗತಿ ವಿದ್ಯಾರ್ಥಿನಿ ಮೃತ
![Dakshina Kannada](https://hosakannada.com/wp-content/uploads/2024/03/IMG-20240320-WA0082.jpg)
Dakshina Kannada: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಶಾಲೆಯೊಂದರ 2ನೇ ತರಗತಿ ವಿದ್ಯಾರ್ಥಿನಿ ಇಂದು ಬುಧವಾರ (ಮಾ.20) ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿದ ಘಟನೆ ನಡೆದಿದೆ.
![](https://hosakannada.com/wp-content/uploads/2024/07/First.jpeg)
![](https://hosakannada.com/wp-content/uploads/2024/07/Middle.jpeg)
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತಲಪಾಡಿಯ ಸಫೀರ್ ಅಹ್ಮದ್ ಎಂಬುವವರ ಮಗಳು ಆಯಿಷಾ ಶಹಿಮ (7) ಎಂಬುವವಳೇ ಮೃತಪಟ್ಟ ವಿದ್ಯಾರ್ಥಿನಿ.
IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?
ಇದನ್ನೂ ಓದಿ: Physical Abuse: ಒಂಟಿಯಾಗಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿ ಬಂದು ತಬ್ಬಿಕೊಂಡ ಕಾಮುಕ
ಮೂರು ವಾರದ ಹಿಂದೆ ಮನೆಯಲ್ಲಿ ಕುಸಿದು ಬಿದ್ದಿದ್ದ ಶಹಿಮಾಳನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 2-3ದಿನ ಕೋಮಾ ಅವಸ್ಥೆಯಲ್ಲಿದ್ದ ಈಕೆ, ಹೆಚ್ಚಿನ ಚಿಕಿತ್ಸೆ ನೀಡಿದ್ದಾದ್ದರೂ ಸ್ವಲ್ಪ ಸ್ಪಂದನೆ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆದರೂ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ ಹೊಂದಿದ್ದಾಳೆ.