Home » ದೇಶದಲ್ಲಿರುವುದು ಒಂದೇ ಶಿವಸೇನೆ, ಅದನ್ನು ಏಕನಾಥ್ ಶಿಂಧೆ ಮುನ್ನಡೆಸುತ್ತಾರೆ – ಅಮಿತ್ ಶಾ ಘೋಷಣೆ!!

ದೇಶದಲ್ಲಿರುವುದು ಒಂದೇ ಶಿವಸೇನೆ, ಅದನ್ನು ಏಕನಾಥ್ ಶಿಂಧೆ ಮುನ್ನಡೆಸುತ್ತಾರೆ – ಅಮಿತ್ ಶಾ ಘೋಷಣೆ!!

0 comments

ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಪಕ್ಷದಲ್ಲಿ ಮತ್ತೊಮ್ಮೆ ಬಿರುಕು ಮೂಡಿರುವ ವದಂತಿಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Shah) ಅವರು ದೇಶದಲ್ಲಿ ಇರುವುದು ಒಂದೇ ಶಿವ ಸೇನೆ. ಅದನ್ನು ಏಕನಾಥ್ ಶಿಂಧೆ ಅವರ ಮುನ್ನಡೆಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದು ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ

ಕೊಲ್ಹಾಪುರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗೃಹ ಸಚಿವ ಷಾ, ಹಿಂದೆಲ್ಲಾ ಜನರು ಏಕನಾಥ್ ಶಿಂಧೆ ಅವರ ಹೆಸರಿನ ಮುಂದೆ ಶಿವಸೇನೆ-ಶಿಂಧೆ ಬಣ ಎಂದು ಹೇಳಬೇಕಾಗುತ್ತಿತ್ತು. ಆದರೆ ಈಗ ಯಾವುದೇ ಬಣಗಳು ಉಳಿದಿಲ್ಲ, ಮಹಾರಾಷ್ಟ್ರದಲ್ಲಿ ಇರುವುದು ಒಂದೇ ಒಂದು ನಿಜವಾದ ಶಿವಸೇನೆ ಮತ್ತು ಅದನ್ನು ಡಿಸಿಎಂ ಏಕನಾಥ್ ಶಿಂಧೆ ಮುನ್ನಡೆಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ.

ಒಟ್ಟಿನಲ್ಲಿ ಉದ್ಧವ್ ಠಾಕ್ರೆ ಅವರ ಶಿವಸೇನಾ (UBT) ಬಣದ ಹಲವು ಸಂಸದರು ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನೆಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾದ ತೆರೆಮರೆಯ ರಾಜಕೀಯ ತಂತ್ರಗಾರಿಕೆಗೆ ಆಪರೇಷನ್ ಟೈಗರ್ ಎಂದು ಕರೆಯಲಾಗುತ್ತಿದ್ದು, ಇದು ಉದ್ಧವ್ ಕ್ಯಾಂಪ್‌ನಲ್ಲಿ ಮತ್ತೊಂದು ದೊಡ್ಡ ಬಿಕ್ಕಟ್ಟು ಸೃಷ್ಟಿಸಿದೆ.

You may also like