Free cylinder: ಈ ದಿನ ಜನರಿಗೆ ಉಚಿತವಾಗಿ ಸಿಗಲಿದೆ LPG ಸಿಲಿಂಡರ್ !! ರಾಜ್ಯ ಸರ್ಕಾರದ ಹೊಸ ನಿರ್ಧಾರ

Free cylinder: ಹೋಳಿ ಹಬ್ಬ ಎಂದರೆ ಇಡೀ ದೇಶವೇ ಸಂಭ್ರಮಿಸುವ ಒಂದು ಹಬ್ಬ. ಇದರೊಂದಿಗೆ ಕೋಟ್ಯಂತರ ಜನರಿಗೆ ಡಬಲ್ ಧಮಾಕ ಆಗಿದೆ. ಅದೇನೆಂದರೆ ಅವರಿಗೆಲ್ಲಾ ಉಚಿತ ಎಲ್‌ಪಿಜಿ ಸಿಲಿಂಡ‌ರ್ ಸಿಗಲಿದೆ.

ಹೌದು, ಇದು ಸುಳ್ಳಲ್ಲ. ನಿಜ, ನೀವು ಉತ್ತರ ಪ್ರದೇಶದ ನಿವಾಸಿಗಳಾಗಿದ್ದರೆ, ಹೋಳಿ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಉಚಿತ ಗ್ಯಾಸ್‌(Free cylinder) ಸಿಲಿಂಡರ್‌ಗಳನ್ನು ನೀಡುತ್ತದೆ. ಈ ಲಾಭ ಪಡೆಯಬೇಕೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ(PM Ujwal scheme)ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್‌ ಲಿಂಕ್ ಮಾಡಬೇಕಾಗುತ್ತದೆ.

ಏನಿದು ಸರ್ಕಾರದ ಹೊಸ ನಿರ್ಧಾರ?

ಕಳೆದ ವರ್ಷ ನವೆಂಬರ್‌ನಲ್ಲಿ ಉತ್ತರ ಪ್ರದೇಶದ(Uttar Pradesh)ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi adithyanth) ಅವರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಾಜ್ಯದ 1.75 ಕೋಟಿ ಅರ್ಹ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಸಿಲಿಂಡ‌ರ್ ಮರುಪೂರಣ ವಿತರಣಾ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ವೇಳೆ ವರ್ಷಕ್ಕೆ ಎರಡು ಬಾರಿಯಂತೆ ದೀಪಾವಳಿ ಮತ್ತು ಹೋಳಿ ಸಂದರ್ಭದಲ್ಲಿ ಉಚಿತ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲು ಸರ್ಕಾರ ಯೋಜಿಸಿತ್ತು. ಈಗಾಗಲೆ ನವೆಂಬರ್ ತಿಂಗಳ ದೀಪಾವಳಿಯ ಸಂದರ್ಭದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ನೀಡಲಾಗಿದೆ. ಈಗ ಫಲಾನುಭವಿಗಳಿಗೆ ಹೋಳಿಯಲ್ಲಿಯೂ ಈ ಉಡುಗೊರೆ ಸಿಗಲಿದೆ.

Leave A Reply

Your email address will not be published.