Bengaluru: ಮರಕ್ಕೆ ಆಸಿಡ್ ಸುರಿದ ಅಂಗಡಿಯವ; ಕಾರಣವೇನು?
![Bengaluru](https://hosakannada.com/wp-content/uploads/2024/03/IMG-20240306-WA0034.jpg)
Bengaluru: ಸದಾಶಿವನಗರದ ಸ್ಯಾಂಕಿ ರಸ್ತೆಯಲ್ಲಿರುವ ಅಂಗಡಿಯವರು ತನ್ನ ಅಂಗಡಿ ಹೊರಗಿನವರಿಗೆ ಸರಿಯಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಮರವೊಂದಕ್ಕೆ ಆಸಿಡ್ ಸುರಿದಿರುವ ಘಟನೆಯೊಂದು ನಡೆದಿದೆ. ಸ್ಯಾಂಕಿ ರಸ್ತೆಯಲ್ಲಿರುವ ಅಮ್ಮನ ಪೇಸ್ಟ್ರೀಸ್ ಮತ್ತು ಅಂಗಡಿ ಗ್ಯಾಲೇರಿಯಾ ಮುಂಭಾಗದಲ್ಲಿ ಈ ಮರವಿದ್ದು, ಈ ಮರಕ್ಕೆ ಅಂಗಡಿಯವರ ಕಳೆದ ವಾರ ಆಸಿಡ್ ಸುರಿದಿರುವುದಾಗಿ ಸ್ಥಳಿಯರು ಹೇಳಿರುವುದಾಗಿ ವರದಿಯಾಗಿದೆ.
![](https://hosakannada.com/wp-content/uploads/2024/07/First.jpeg)
ಇದನ್ನೂ ಓದಿ: Acid Attack Kadaba: ಕಡಬ ಆಸಿಡ್ ಪ್ರಕರಣ; ಘಟನೆಗೆ ಮುನ್ನ ಸಂತ್ರಸ್ತೆಯನ್ನು ಭೇಟಿಯಾಗಿದ್ದ ಆರೋಪಿ
![](https://hosakannada.com/wp-content/uploads/2024/07/Middle.jpeg)
2024 ಆರಂಭದಿಂದ ಇಲ್ಲಿಯವರೆಗೂ ಇದು ಮೂರನೇ ಘಟನೆಯಾಗಿದೆ. ಜನವರಿಯಲ್ಲಿ ಕೆಆರ್ ಮಾರುಕಟ್ಟೆ ಬಳಿ ಪೊಂಗಮಿಯಾ ಮರಗಳನ್ನು ನಾಶಪಡಿಸುವ ಪ್ರಯತ್ನ ನಡೆದಿತ್ತು. ಎರಡು ತಿಂಗಳ ಅವಧಿಯಲ್ಲಿ ಇದು ಮೂರನೇ ಪ್ರಯತ್ನ ಎಂದು ಮರಗಳ ಸಂರಕ್ಷಣಾಧಿಕಾರಿ ವಿಜಯ್ ನಿಶಾಂತ್ ಅವರು ಹೇಳಿರುವುದಾಗಿ ವರದಿಯಾಗಿದೆ.