Bengaluru: ಜೆಸಿಬಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ; ಸುಟ್ಟವರ ಆಸ್ತಿ ಜಪ್ತಿ

ಯಲಹಂಕ: ತಾಲೂಕಿನ ಶಿವಕೋಟೆ ಗ್ರಾಮದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಮುಂದಾದಾಗ ಪೊಲೀಸರ ಎದುರೇ ಜೆಸಿಬಿ ಮೇಲೆ ಪೆಟ್ರೋಲ್ ಬೆಂಕಿಯಿಟ್ಟು ಆತಂಕ ಎಸೆದು ಸೃಷ್ಟಿಸಿದ್ದ ಒತ್ತುವರಿದಾರ ಬಚ್ಚೇಗೌಡ ಮತ್ತು ಪುತ್ರ ಚೇತನ್‌ಗೆ ಸೇರಿದ ಸಂಪೂರ್ಣ ಅಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಾಲೂಕು ದಂಡಾಧಿಕಾರಿ ಅನಿಲ್ ಕುಮಾರ್ ಅರೋಲಿಕರ್ ಹೇಳಿದರು.

ಇದನ್ನೂ ಓದಿ: BBMP: ಬಿಬಿಎಂಪಿಯ ₹12,371 ಕೋಟಿ ಬಜೆಟ್ ಅನಾವರಣ : ‘ಬ್ರಾಂಡ್ ಬೆಂಗಳೂರು’, ‘ಮೂಲ ಸೌಕರ್ಯ ಅಭಿವೃದ್ಧಿ’ಗೆ ಸಿಂಹ ಪಾಲು

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 425ರಡಿ ದೂರು ದಾಖಲಿಸಿ ಕಂದಾಯ ಇಲಾಖೆಯಿಂದಲೇ ಸಂಪೂರ್ಣ ಆಸ್ತಿಯನ್ನು ವಶಕ್ಕೆ ಪಡೆಯಲಾಗುವುದು ಎಂದು ಅವರು ವಿವರಿಸಿದರು.

Leave A Reply

Your email address will not be published.