Watermelon seed: ಕಲ್ಲಂಗಡಿ ತಿಂದು ಅದರ ಬೀಜ ಬಿಸಾಡ್ತೀರಾ ?! ಈ ವಿಚಾರ ಏನಾದ್ರೂ ಗೊತ್ತಾದ್ರೆ ಎಲ್ಲೇ ಹಣ್ಣು ತಿಂದ್ರೂ ಬೀಜ ಮನೆಗೆ ತರ್ತೀರಾ !!

Watermelon seed: ಕಲ್ಲಂಗಡಿ ಹಣ್ಣು ಅಂದರೆ ಹೆಚ್ಚಿನವರಿಗೆ ಬಲು ಪ್ರೀತಿ. ಇದನ್ನು ತಿಂದರೆ ಸಣ್ಣ ಆಗುತ್ತಾರೆ, ದೇಹಕ್ಕೆ ತಂಪು ನೀಡುತ್ತದೆ, ದಾಹ ನೀಗಿಸುತ್ತದೆ ಎಂದು ಹಲವರು ಇದನ್ನು ತಿನ್ನುತ್ತಾರೆ. ಎಲ್ಲರೂ ಹಣ್ಣನ್ನು ಮಾತ್ರ ತಿಂದು ಇದರಲ್ಲಿರುವ ಬೀಜವನ್ನು(Watermelon seed) ಬಿಸಾಡುತ್ತಾರೆ. ಆದರೆ ಈ ವಿಚಾರ ಏನಾದರೂ ತಿಳಿದರೆ ನೀವು ಎಂದೂ ಆ ರೀತಿ ಮಾಡುವುದಿಲ್ಲ. ಎಲ್ಲೇ ಕಲ್ಲಂಗಡಿ ಹಣ್ಣನ್ನು ತಿಂದರೂ ಬೀಜವನ್ನು ಸಂಗ್ರಹಿಸಿ ಮನೆಗೆ ತರುತ್ತೀರ.

ಇದನ್ನೂ ಓದಿ: Ration card: ಈ ದಿನದಿಂದ ಹೊಸ ರೇಷನ್ ಕಾರ್ಡ್ ವಿತರಣೆ !!

ಹೌದು, ಇನ್ಸ್ಟಾಗ್ರಾಮ್(Instagram)ಪೇಜ್ ನಲ್ಲಿ ಆಯುರ್ವೇದ ಟಿಪ್ಸ್ ಇನ್ ಕನ್ನಡ ಎಂಬ ಖಾತೆಯಲ್ಲಿ ಬಸವರಾಜ(Basavaraj) ಎಂಬ ವೈದ್ಯರು ಕಲ್ಲಂಗಡಿ ಹಣ್ಣಿನ ಬೀಜದ ಪ್ರಾಮುಖ್ಯತೆ ಬಗ್ಗೆ ಹೇಳಿದ್ದನ್ನು ಕೇಳಿದ್ರೆ ನೀವೆಂದೂ ಬೀಜವನ್ನು ಬಿಸಾಡುವುದಿಲ್ಲ.

ಅಂದಹಾಗೆ ಕಲ್ಲಂಗಡಿ ಹಣ್ಣಿನ ಬೀಜವು ಕ್ಯಾಲ್ಸಿಯಮ್ ರಿಚ್ ಆಗಿದೆ. ಇದರ ಬೀಜವನ್ನು ಒಣಗಿಸಿ ಅದರ ಸಿಪ್ಪೆ ತೆಗೆದು ಒಳಗಿನ ತಿರುಳನ್ನು ತಿಂದರೆ ಅದು ಅಮೃತ ಸಮವಂತೆ. ಯಾರಿಗೆ ಮೂಳೆ ನೋವಿದೆ, ಮೂಳೆಯ ಸಮಸ್ಯೆ ಸದಾ ಕಾಡುತ್ತೆ, ಕೀಲು ನೋವಿನಿಂದ ಬಳಲುತ್ತಾರೆ, ಕೀಲುಗಳು ಕಟ ಕಟ ಎನ್ನುತ್ತವೆ, ಕುತ್ತಿಗೆ, ಬುಜಗಳು ಯಾರಿಗೆ ನೋವುಂಟುಮಾಡುತ್ತದೆ ಅಂತವರು ಈ ಬೀಜ ತಿಂದರೆ ಯಾವ ಸಮಸ್ಯೆಯೂ ಬಾರದು. ಇದು ಪ್ರಕೃತಿದತ್ತವಾಗಿ ಸಿಗುವ ಕ್ಯಾಲ್ಸಿಯಂ ಆಗಿದೆ.

ಹೀಗಾಗಿ ವೈದ್ಯ ಬಸವರಾಜ್ ಅವರು ಯಾವುದೇ ಕಾರಣಕ್ಕೂ ಕಲ್ಲಂಗಡಿ ಬೀಜವನ್ನು ಬಿಸಾಡಬೇಡಿ, ಹಣ್ಣನ್ನು ತಿನ್ನುವಾಗಲೇ ಬೀಜವನ್ನು ಕಡಿದು ನುಂಗಿ, ಮಕ್ಕಳಿಗೆ ಒಣಗಿಸಿ ಸುಟ್ಟು ಕೊಡಿ ಎಂದು ಸಲಹೆ ನೀಡಿದ್ದಾರೆ.

Leave A Reply

Your email address will not be published.