Murder Case: ಮದುವೆ ಮಾಡಿಲ್ಲ ಎಂದು ಕುಡಿತದ ನಶೆಯಲ್ಲಿ ಕಟ್ಟಿಗೆಯಿಂದ ಹೊಡೆದು ತಾಯಿಯ ಕೊಂದ ಪುತ್ರ!
![Murder Case](https://hosakannada.com/wp-content/uploads/2024/02/IMG-20240205-WA0046-1.jpg)
Son Kills Mother: ತನಗೆ ಮದುವೆ ಮಾಡಿಸುತ್ತಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ತಾಯಿಯನ್ನೇ ಕೊಂದ ಘಟನೆಯೊಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಪೂಚಾವರಂಬಲ್ಲಿ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಅನಿಲ್ (25) ತನ್ನ ತಾಯಿಯನ್ನು ಕೊಂದಾತ. ತಾಯಿ ಶೋಭಾ (45) ಕೊಲೆಯಾದವರು. ಘಟನಾ ಸ್ಥಳಕ್ಕೆ ಕುಂಚಾವರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಲ್ಲದೆ, ಕೊಲೆ ಮಾಡಿದ ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.
![](https://hosakannada.com/wp-content/uploads/2024/07/Middle.jpeg)
ಇದನ್ನೂ ಓದಿ: Karnataka government : ರಾಮ ಮಂದಿರಕ್ಕೆ ಸಿದ್ದರಾಮಯ್ಯ ಸರ್ಕಾರದಿಂದ 100 ಕೋಟಿ ಅನುದಾನ ?!
ಅನಿಲ್ ಕುಡಿತದ ದಾಸನಾಗಿದ್ದು, ಜೊತೆಗೆ ಸರಿಯಾಗಿ ಕೆಲಸ ಮಾಡದೆ ತಾಯಿಯ ಕೈಯಿಂದಲೇ ಹಣವನ್ನು ಕಿತ್ತುಕೊಂಡು ಹೋಗಿ ಸರಾಯಿ ಕುರಿಯುತ್ತಿದ್ದ. ಇದರ ನಡುವೆ ತನಗೆ ಮದುವೆ ಮಾಡು ಎಂದ ದಂಬಾಳು ಬಿದ್ದಿದ್ದ. ಈ ವಿಚಾರಕ್ಕೆ ಭಾನುವಾರ ತಾಯಿ ಮತ್ತು ಮಗನ ನಡುವೆ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ಮಗ ಕುಡಿದ ನಶೆಯಲ್ಲಿ ತಾಯಿಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.