Rama Mandir: ಒಂದು ದಿನ ಬಾಬರಿ ಮಸೀದಿ ಎದ್ದು ನಿಲ್ಲಲಿದೆ ಎಂದ ಶಾರೂಖ್‌ ಖಾನ್‌- FIR ದಾಖಲು!!!

Rama Mandir: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಕೊಪ್ಪಳದಲ್ಲಿ ಯುವಕನೋರ್ವ ಸಮಾಜದ ಶಾಮತಿ ಕದಡುವ ರೀತಿಯಲ್ಲಿ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕದಿದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಶಾರುಕ್‌ ಖಾನ್‌ (25) ಎಂಬಾತನೇ ಈ ವಿವಾದಾತ್ಮಕ ಪೋಸ್ಟ್‌ ಹಾಕಿದ್ದು. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನವರಿ 20 ರಂದು ಈ ಪೋಸ್ಟ್‌ ಹಾಕಲಾಗಿದೆ. ಮಂದಿರ ಒಂದಲ್ಲ ನೂರು, ಸಾವಿರ ಕಟ್ಟಿಕೊಳ್ಳಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮಸೀದಿಯನ್ನು ಕೆಡವಿ ಅದರ ಮೇಲೆ ನಿರ್ಮಿಸಿರುವ ಮಂದಿರಕ್ಕೆ ನಮ್ಮ‌ ವಿರೋಧವಿದೆ. ಇನ್ಶಾ ಅಲ್ಲಾಹ್ ಒಂದು ದಿನ ಬಾಬರಿ ಮಸೀದಿ ಎದ್ದು ನಿಲ್ಲಲಿದೆ’ ಎಂಬ ಸಂದೇಶವನ್ನು ಈ ಯುವಕ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ.

ಶಾರುಕ್‌ ಖಾನ್‌ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ನಿವಾಸಿ. ಇತ್ತೀಚೆಗೆ ಈತ ಕೊಪ್ಪಳದ ಶ್ರೀ ಶೈಲ ನಗರದಲ್ಲಿ ವಾಸವಿದ್ದಾನೆ.

 

1 Comment
  1. Prakash Shenoy says

    Sathya meva jayathe.sathyakke Jaya vide..moorkha paki gale

Leave A Reply

Your email address will not be published.