Central government: ದೇಶಾದ್ಯಂತ ಎಲ್ಲಾ ರೈತರಿಗೂ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ- ಚುನಾವಣೆ ಹೊತ್ತಲ್ಲಿ ಏನಿದು ಸರ್ಕಾರದ ಹೊಸ ನಡೆ ?!
![Central government](https://hosakannada.com/wp-content/uploads/2023/12/WhatsApp-Image-2023-12-06-at-5.41.47-PM.jpeg)
Central Government: ರೈತರ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರ ಒಪಿಎಂಸಿ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅಡಿಯಲ್ಲಿ ನೀಡುವ ಆರ್ಥಿಕ ನೆರವನ್ನು ಸರ್ಕಾರ ಹೆಚ್ಚು ಮಾಡುತ್ತದೆ ಎಂಬ ವಿಚಾರ ಸಾಕಷ್ಟು ಸುದ್ಧಿಯಾಗಿತ್ತು. ಆದರೀಗ ಈ ಕುರಿತು ಕೇಂದ್ರ ಸರ್ಕಾರವು(Central Government) ಬಿಗ್ ಅಪ್ಡೇಟ್ ನೀಡಿದ್ದು ದೇಶದ ರೈತರಿಗೆ ಶಾಕ್ ಎದುರಾಗಿದೆ.
![](https://hosakannada.com/wp-content/uploads/2024/07/First.jpeg)
ಹೌದು, ಪಿಎಂ ಕಿಸಾನ್(PM Kissan)ಯೋಜನೆಯಡಿ ನೀಡುವ ಆರ್ಥಿಕ ನೆರವನ್ನು ಹೆಚ್ಚಿಸುವ ಯಾವುದೇ ಯೋಚನೆ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರವು ಕಡ್ಡಿ ತುಂಡಾಗುವಂತೆ ಹೇಳಿದೆ. ಅಂದಹಾಗೆ ಲೋಕಸಭಾ ಅಧಿವೇಶನದಲ್ಲಿ ಈ ಕುರಿತಂತೆ ಪ್ರಶ್ನೆ ಕೇಳಲಾಗಿದ್ದು, ಇದಕ್ಕೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದರು.
![](https://hosakannada.com/wp-content/uploads/2024/07/Middle.jpeg)
ಅಲ್ಲದೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿ ಹಲವು ವಿಷಯಗಳ ಕುರಿತು ಪರಿಶೀಲನೆ ನಡೆಸಲು ಸರ್ಕಾರವು ಸಮಿತಿ ರಚಿಸಿದೆ. ಸಮಿತಿಯು ವರದಿಯನ್ನು ಇನ್ನಷ್ಟೇ ನೀಡಬೇಕಿದೆ ಎಂದು ಅವರು ಹೇಳಿದರು. ಈ ಮೂಲಕ ಪಿಎಂ ಕಿಸಾನ್ ಯೋಜನೆಯಡಿ ಹಣ ಹೆಚ್ಚಾಗುತ್ತದೆ, ಲೋಕಸಭಾ ಚುನಾವಣೆ ಇರುವುದರಿಂದ ಖಂಡಿತಾ ಆಗೇ ಆಗುತ್ತದೆ ಎಂದು ಭಾವಿಸಿದ್ದ ರೈತರಿಗೆ ಭಾರೀ ದೊಡ್ಡ ಆಘಾತ ಎದುರಾಗಿದೆ.
ಪಿಎಂ ಕಿಸಾನ್ ಯೋಜನೆ:
ಯೋಜನೆ ಅಡಿ ಸದ್ಯ ಪ್ರತೀ ವರ್ಷ ರೈತರಿಗೆ ₹ 6,000ವನ್ನು ಮೂರು ಕಂತುಗಳಲ್ಲಿ ಅಂದರೆ ಪ್ರತೀ ಕಂತಿಗೆ 2,000 ರೂಪಾಯಿಗಳಂತೆ ನೀಡಲಾಗುತ್ತಿದೆ. ಈ ವರೆಗೆ ಕೇಂದ್ರವು ₹ 2.81 ಲಕ್ಷ ಕೋಟಿಯನ್ನು 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 15 ಕಂತುಗಳಲ್ಲಿ ರೈತರ ಖಾತೆಗೆ ಜಮಾ ಮಾಡಿದೆ.