Home » ಶೃಂಗೇರಿ ಶಾಸಕರಾಗಿ ಟಿ ಡಿ ರಾಜೇಗೌಡ ಮುಂದುವರಿಯಲು ಸುಪ್ರೀಂ ಕೋರ್ಟ್ ಸೂಚನೆ

ಶೃಂಗೇರಿ ಶಾಸಕರಾಗಿ ಟಿ ಡಿ ರಾಜೇಗೌಡ ಮುಂದುವರಿಯಲು ಸುಪ್ರೀಂ ಕೋರ್ಟ್ ಸೂಚನೆ

0 comments

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಶೃಂಗೇರಿ ಶಾಸಕರಾಗಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರ ಮುಂದುವರಿಕೆ ಸಂಬಂಧ ನೀಡಿದ್ದ ಮಧ್ಯಂತರ ಆದೇಶವನ್ನು ಮುಂದುರಿಸುವಂತೆ ಸೂಚಿಸಿದೆ.

ವಿನೋದ್ ಚಂದ್ರನ್ ಅವರ ನ್ಯಾಯಪೀಠ ಕಳೆದವಾರ ಮಧ್ಯಂತರ ಪರಿಹಾರ ನೀಡಿತ್ತು. ಸದ್ಯಕ್ಕೆ ಕ್ಷೇತ್ರದ ರಾಜೇಗೌಡ ಶಾಸಕರಾಗಿ ಉಳಿಯಬೇಕೆಂದು ಆದೇಶಿಸಿತ್ತು. ವಿಚಾರಣೆಯನ್ನು ಮೇ 21ಕ್ಕೆ ಮುಂದೂಡಿತು. ಇಂದು ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು ಮತ್ತೆ ರಾಜೇಗೌಡ ಅವರು ಶಾಸಕರಾಗಿ ಮುಂದುವರೆಯುವಂತೆ ನ್ಯಾಯಾಲಯವು ಸೂಚಿಸಿದ್ದು, ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿದೆ.

You may also like