Home » ಪ್ರಮಾಣವಚನ ಸ್ವೀಕರಿಸುವಾಗ ವೇದಿಕೆಯಲ್ಲೇ ನೂತನ ಸಚಿವರಿಗೆ ಕ್ಲಾಸ್ ತೆಗೆದುಕೊಂಡ ರಾಜ್ಯಪಾಲರು – ಆ ತಪ್ಪಿಗೆ ಕೆಂಡಮಂಡಲವಾದ ಗೌರ್ನರ್

ಪ್ರಮಾಣವಚನ ಸ್ವೀಕರಿಸುವಾಗ ವೇದಿಕೆಯಲ್ಲೇ ನೂತನ ಸಚಿವರಿಗೆ ಕ್ಲಾಸ್ ತೆಗೆದುಕೊಂಡ ರಾಜ್ಯಪಾಲರು – ಆ ತಪ್ಪಿಗೆ ಕೆಂಡಮಂಡಲವಾದ ಗೌರ್ನರ್

0 comments

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ 13 ಸಚಿವರು ಕೂಡ ಪ್ರಮಾಣವಚನವನ್ನು ಪಡೆದಿದ್ದಾರೆ. ಆದರೆ ಸಚಿವರಿಗೆ ಪ್ರಮಾಣವಚನ ಬೋಧಿಸುವ ಸಂದರ್ಭದಲ್ಲಿ ರಾಜ್ಯದ ರಾಜಪಾಲರು ವೇದಿಕೆಯಲ್ಲಿಯೇ ಸಿಟ್ಟಾಗಿದ್ದು, ಅವರೆಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರ ತಡವಾಗಿ ಬಯಲಾಗಿದೆ. ಅದಕ್ಕೆ ಕಾರಣವೂ ಇದೆ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಚಿವರು ನಿಗದಿತ ಸಾಂವಿಧಾನಿಕ ನಮೂನೆಯನ್ನು ಕೈಬಿಟ್ಟು, ತಮ್ಮ ಆರಾಧ್ಯ ದೈವಗಳು, ಗುರುಗಳು ಹಾಗೂ ನಾಯಕರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಮಧ್ಯಪ್ರವೇಶಿಸಿ ‘ನಿಗದಿತ ನಮೂನೆಗೆ ಬದ್ಧರಾಗಿರಿ’ ಎಂದು ಸಿಟ್ಟಾಗಿ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಯಿತು. ಅಧಿಕೃತ ಪಠ್ಯದಲ್ಲಿ ಇಲ್ಲದ ಪದಗಳನ್ನು ಸೇರಿಸಿ ಹೇಳಿದ್ದೇ ರಾಜ್ಯಪಾಲರ ಈ ಎಚ್ಚರಿಕೆಗೆ ಪ್ರಮುಖ ಕಾರಣ ಎನ್ನಾಗಿದೆ.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಸಂವಿಧಾನಬದ್ಧವಾಗಿ ಒದಗಿಸಲಾದ ನಿಗದಿತ ಪಠ್ಯವನ್ನು ಯಥಾವತ್ತಾಗಿ ಓದುವ ಬದಲು, ಕೆಲವು ನಾಯಕರು ತಮಗೆ ಇಷ್ಟವಾದ ಮಹನೀಯರ, ಗುರುಗಳ ಹಾಗೂ ನಾಯಕರ ಹೆಸರುಗಳನ್ನು ಸೇರಿಸಿದ್ದು ರಾಜ್ಯಪಾಲರ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತದ ಸಂವಿಧಾನದ ನಿಯಮಗಳ ಪ್ರಕಾರ, ಯಾವುದೇ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ಕೇವಲ “ದೇವರ ಹೆಸರಿನಲ್ಲಿ” (In the name of God) ಅಥವಾ “ಶ್ರದ್ಧಾಪೂರ್ವಕವಾಗಿ” (Solemnly affirm) ಎಂದು ಮಾತ್ರ ಹೇಳಬೇಕು. ಆದರೆ, ಈ ಸಮಾರಂಭದಲ್ಲಿ ಪ್ರಾರಂಭದಲ್ಲಿ ಬಂದ ಕೆಲವರು ಈ ನಿಯಮವನ್ನು ಉಲ್ಲಂಘಿಸಿ ತಮ್ಮ ಭಾವನೆಗಳಿಗೆ ತಕ್ಕಂತೆ ಪದಗಳನ್ನು ಸೇರಿಸಿದರು. ಡಿ.ಕೆ. ಶಿವಕುಮಾರ್ ಅವರು ‘ಗಂಗಾಧರ ಅಜ್ಜಯ್ಯ’ನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಕೆಲವರು ತಮ್ಮ ಆರಾಧ್ಯ ನಾಯಕರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನು ಗಮನಿಸಿದ ರಾಜ್ಯಪಾಲರು ತಮಗೆ ಕೊಟ್ಟಿರುವ ಕಾಗದದಲ್ಲಿ ಏನಿದೆ ಅದನ್ನು ಮಾತ್ರ ಓದಿ ಬೇರೆ ಪದಗಳನ್ನು ಸೇರಿಸಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

banner

You may also like