Home » ಅಧಿಕಾರ ಬೇಕು ಅನ್ನೋರು ಡಿಕೆಶಿ ಹಿಂದೆ ಹೋಗಿ, ಪಕ್ಷ ಕಟ್ಟಬೇಕು ಅಂದ್ರೆ ಮಾತ್ರ ನಮ್ಮ ಜೊತೆ ಬನ್ನಿ – ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಖಡಕ್ ಮಾತು

ಅಧಿಕಾರ ಬೇಕು ಅನ್ನೋರು ಡಿಕೆಶಿ ಹಿಂದೆ ಹೋಗಿ, ಪಕ್ಷ ಕಟ್ಟಬೇಕು ಅಂದ್ರೆ ಮಾತ್ರ ನಮ್ಮ ಜೊತೆ ಬನ್ನಿ – ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಖಡಕ್ ಮಾತು

0 comments

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹಾಗೂ 13 ಸಚಿವರು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಇದರ ಜೊತೆಗೆ ಕೆಪಿಸಿಸಿ ಸಾರಥ್ಯವನ್ನ ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರ ಹೆಗಲಿಗೆ ವಹಿಸಲಾಗಿದೆ. ಇದರ ಬೆನ್ನಲ್ಲೇ ಹರಿಪ್ರಸಾದ್ ಅವರು ಆಡಿರುವ ಖಡಕ್ ಮಾತುಗಳು ಎಲ್ಲೆಡೆ ವೈರಲಾಗುತ್ತಿವೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ ಅವರು, ಯಾರಿಗೆ ಸ್ಥಾನಮಾನ, ಅಧಿಕಾರ ಬೇಕು ಅನಿಸುತ್ತದೆಯೋ ಅವರು ಡಿಕೆ ಶಿವಕುಮಾರ್ ಹಿಂದೆ ಹೋಗಿ. ಪಕ್ಷ ಕಟ್ಟಬೇಕು, ಪಕ್ಷವನ್ನು ಬಲಗೊಳಿಸಬೇಕು ಎಂಬ ಮನೋಭಾವ ಇರುವವರು ನಮ್ಮ ಜೊತೆಗೆ ಬನ್ನಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 

ಅಲ್ಲದೆ ರಾಹುಲ್ ಗಾಂಧಿಯವರ ಹೋರಾಟಕ್ಕೆ ಶಕ್ತಿ ತುಂಬುವುದು ನನ್ನ ಗುರಿ. ಕಾರ್ಯಕರ್ತರ ಜೊತೆ ನಾನು ಸದಾ ನಿಲ್ಲುತ್ತೇನೆ. ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು. ಹುದ್ದೆಗಿಂತಲೂ ಜನರು ಮುಖ್ಯ.  ದೇಶದ ಸಂವಿಧಾನವೇ ನಮ್ಮ ದಾರಿ. ಸಾಮಾಜಿಕ ನ್ಯಾಯವೇ ನಮ್ಮ ಗುರಿ ಎಂದು ಖಡಕ್ ಮಾತಿನಲ್ಲಿ ಹೇಳಿದ್ದಾರೆ. ಸದ್ಯ ಅವರ ಮಾತುಗಳು ಇದೀಗ ರಾಜ್ಯ ರಾಜಕೀಯದಲ್ಲಿ ಅಚ್ಚರಿಯೊಂದಿಗೆ ಸಂಚಲನ ಸೃಷ್ಟಿಸಿದೆ.

You may also like