Udupi: ಉಡುಪಿಯ ಪಿತ್ರೋಡಿಯಲ್ಲಿ ಅಸ್ಸಾಂ ಯುವಕನಿಗೆ ದೆವ್ವದ ಆವೇಶ – ಎದ್ದು ಬಿದ್ದು ಓಡಿದ ಕಾರ್ಮಿಕರು

Udupi: ಉಡುಪಿಗೆ ಕೆಲಸಕ್ಕೆಂದು ಬಂದಿರುವ ಅಸ್ಸಾಂ ಯುವಕನೊಬ್ಬನ ಮೇಲೆ ದೆವ್ವದ ಆಹ್ವಾನವಾಗಿದ್ದು ಆತನ ಜೊತೆಯಲ್ಲಿದ್ದಂತಹ ಎಲ್ಲಾ ಕಾರ್ಮಿಕರು ಎದ್ದು ಬಿದ್ದು ಎಂದು ಓಡಿದಂತ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಅಸ್ಸಾಂ ನಿಂದ ಯುವಕರ ತಂಡವೊಂದು ಉಡುಪಿ(Udupi) ಜಿಲ್ಲೆ ಕಾಪುವಿನ ಉದ್ಯಾವರ ಪಿತ್ರೋಡಿಯಲ್ಲಿ ಫಿಶ್ ಕಟ್ಟಿಂಗ್ ಯೂನಿಟ್ ನಲ್ಲಿ ಕೆಲಸಮಾಡಿಕೊಂಡಿದೆ. ಈ ವೇಳೆ ಅಸ್ಸಾಂ ಯುವಕನೊಬ್ಬನ ಮೇಲೆ ದೆವ್ವ ಬಂದಿದ್ದು ಜೊತೆಯಲ್ಲಿದ್ದವರೆಲ್ಲಾ ಎದು ಬಿದ್ದು ಓಡಿದ್ದಾರೆ. ಅಸ್ಸಾಂ ಬಿಹಾರ ಪಶ್ಚಿಮ ಬಂಗಾಳದ ಕಾರ್ಮಿಕರು ಭಯ ಬಿದ್ದು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಇದನ್ನು ಓದಿ: Patanjali Advertisement: ಪತಂಜಲಿಯ ಔಷಧಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಮಹತ್ವದ ಸೂಚನೆ! ಪ್ರತಿ ಜಾಹೀರಾತಿಗೂ 1 ಕೋಟಿ ದಂಡದ ಎಚ್ಚರಿಕೆ!!!

ಅಂದಹಾಗೆ ಸ್ಥಳೀಯರು ನೀಡುವ ಮಾಹಿತಿ ಪ್ರಕಾರ ಇವರು ಕೆಲಸ ಮಾಡುವ ಕಟ್ಟಡದ ಹಿಂದೆ ಮಾರಿಗುಡಿಯ ಕಲ್ಲು ಇದ್ದು ಅಲ್ಲಿ ಪ್ರತಿ ವರ್ಷವೂ ಕೋಳಿ ಬಲಿ ನಡೆಯುತ್ತದೆ. ಆದರೆ ಈ ಕಾರ್ಮಿಕರು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ. ಅದರ ಏನಾದರೂ ತೊಂದರೆ ಇರಬಹುದು ಇದು ಎಂದು ತಿಳಿಸಿದ್ದಾರೆ. ಆದರೆ ಈ ಘಟನೆ ನಡೆಯುತ್ತಿದ್ದಂತೆ ಅನೇಕ ಕಾರ್ಮಿಕರ ಅಲ್ಲಿಂದ ಜಾಗ ಕಿತ್ತಿದ್ದಾರೆ ಆದರೆ ಇದರ ಸತ್ಯಾ ಸತ್ಯತೆ ಏನೆಂಬುದು ಇನ್ನು ತಿಳಿಯಬೇಕಷ್ಟೆ.

 

https://www.facebook.com/share/v/FYhWrFtc9ReVkTqw/?mibextid=XDzfc5

Leave A Reply

Your email address will not be published.