Cauvery struggle: ಕಾವೇರಿ ವಿಚಾರದಲ್ಲಿ ಕರ್ನಾಟಕ ಪರ ನಿಂತ ತಮಿಳು ನಟ – ವೈರಲ್ ಆಯ್ತು ವಿಡಿಯೋ !

Latest news Cauvery struggle Tamil actor stands with Karnataka on the Cauvery issue

Cauvery struggle: ಕಾವೇರಿಯ ಹೋರಾಟ ಇಂದು ಮೊನ್ನೆಯದಲ್ಲ ಹಲವಾರು ಸಮಯದಿಂದ ಕಾವೇರಿ ನೀರಿಗಾಗಿ ರೈತರು ಭರ್ಜರಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ರಾಜಕೀಯ, ನಟ ನಟಿಯರು ಕೂಡ ಈ ಪ್ರತಿಭಟನೆಯ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಈ ಮೊದಲು ತಮಿಳುನಾಡಿಗೆ (tamilnaadu) ಕಾವೇರಿ ನೀರು ಬಿಡುವ ವಿಚಾರದ ಹೋರಾಟದಲ್ಲಿ ಸ್ಯಾಂಡಲ್‌ವುಡ್ (sandalwood) ನಟ, ನಟಿಯರು ಭಾಗಿಯಾಗುತ್ತಿಲ್ಲ. ಕಾವೇರಿ ಹೋರಾಟಕ್ಕೆ (Cauvery struggle) ಬರದ ನಟ-ನಟಿಯ ಚಿತ್ರ ಬ್ಯಾನ್ ಆಗಲಿ ಎಂಬ ಹೇಳಿಕೆಯನ್ನು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಅವರು ಹೇಳಿದ್ದರು.

ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಕಾವೇರಿ ವಿಚಾರವಾಗಿ ಸ್ಯಾಂಡಲ್ ವುಡ್ ನಟರ ಟ್ರೋಲ್ ಮಾಡಲಾಗುತ್ತಿದೆ. ಸದ್ಯ ಕಾವೇರಿ ಹೋರಾಟಕ್ಕೆ ‘ತಮಿಳು ಸಂಘ’ ಸಾಥ್ ನೀಡಿದೆ. ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸಲ್ಲ ಎಂದು ನಾಯಕರು ಹೇಳಿದ್ದಾರೆ. ಜೊತೆಗೆ ಇದೀಗ ತಮಿಳು ನಟನೋರ್ವ ಕಾವೇರಿ ವಿಚಾರದಲ್ಲಿ ಕರ್ನಾಟಕದ ಪರ ನಿಂತಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ.

ಐದು ವರ್ಷದ ಹಿಂದೆ ಕಾವೇರಿ ವಿವಾದ ಉದ್ಭವಿಸಿದ್ದಾಗ ತಮಿಳುನಾಡು ನಟ ಸಿಲಂಬರಸನ್‌ ನೀಡಿದ್ದ ಹೇಳಿಕೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 2018ರಲ್ಲಿ ಮಾತನಾಡಿದ್ದ ಸಿಂಬು ಕರ್ನಾಟಕದಲ್ಲಿ ಕನ್ನಡಿಗರಿಗೆ ಕಾವೇರಿ ನೀರಿಲ್ಲ. ಇಂಥ ಸಮಯದಲ್ಲಿ ಅವರು ನಮಗೆಲ್ಲಿಂದ ಕೊಡ್ತಾರೆ ಎಂದು ಹೇಳಿದ್ದರು. ಅವರು ನೀಡಿದ್ದ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮತ್ತೊಮ್ಮೆ ಸಿಂಬು ಅವರ ಈ ಮಾತುಗಳು ವೈರಲ್‌ ಆಗಿದೆ. ಕಾವೇರಿ ನಮ್ಮದು ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಈ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ.

ಇಲ್ಲಿ ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದ ಜನ ನೀರು ಕೊಡೋದಿಲ್ಲ ಅಂತೇನಾದರೂ ಹೇಳಿದ್ದಾರೆಯೇ? ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಮಾತಾಡುತ್ತಿಲ್ಲ. ನಾನು ಹೆತ್ತ ಮಗ ಅಲ್ಲದೇ ಇದ್ರೂ, ಕರ್ನಾಟಕದಲ್ಲಿರುವಂತ ತಾಯಿಗೆ ಕೇಳ್ತಾ ಇದ್ದೀನಿ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮಗೆ ಕೊಡ್ತೀರಾ ತಾಯಿ ಎಂದಿದ್ದರು. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ವ್ಯಕ್ತಿಗಳ ಮೇಲೂ ಹರಿಹಾಯ್ದಿದ್ದರು. ಸಿಂಬು ಅವರ ಈ ಹೇಳಿಕೆ ಭಾರೀ ವೈರಲ್ ಆಗಿತ್ತು. ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನು ಓದಿ: Karnataka BJP : ಕೊನೆಗೂ ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ !!

Leave A Reply

Your email address will not be published.