Ravindar Chandrasekaran: ಮಹಾಲಕ್ಷ್ಮೀ ಪತಿ ರವೀಂದರ್‌ ಚಂದ್ರಶೇಖರನ್‌ ಅರೆಸ್ಟ್‌!!!

Ravindar Chandrasekaran: ತಮಿಳು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಮತ್ತು ಮಹಾಲಕ್ಷ್ಮೀ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬಹಳ ಸಂಭ್ರಮಿಸಿತ್ತು. ಪತ್ನಿಗೆ ಸುದೀರ್ಘ ಪತ್ರ ಬರೆದ ರವೀಂದರ್‌ ಅವರಿಗೆ ಇದೀಗ ಪೊಲೀಸರು ಶಾಕ್‌ ನೀಡಿದ್ದಾರೆ. ಹೌದು, ರವೀಂದರ್‌ ಚಂದ್ರಶೇಖರ್‌ ಅವರು ಇದೀಗ ಪೊಲೀಸ್‌ ಅತಿಥಿಯಾಗಿದ್ದಾರೆ.

ಲಿಬ್ರಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಡಿಯಲ್ಲಿ, ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆ ಆರಂಭಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನೇ ನಿಜವೆಂದು ನಂಬಿಸಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವ ಕಾರಣ ರವೀಂದರ್‌ ಅವರನ್ನು ಬಂಧನ ಮಾಡಲಾಗಿದೆ.

ಚೆನ್ನೈ ಮಹಾನಗರ ಪೊಲೀಸ್‌ ಆಯುಕ್ತ ಚಂಡಿಮಾಯಿ ರಾಥೋಡ್‌ ದೂರು ದಾಖಲಾದ ಬೆನ್ನಲ್ಲೇ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸುವಂತೆ ಆದೇಶ ಹೊರಡಿಸಿದ್ದರು. ಇದೀಗ ಗುರುವಾರ ರವೀಂದರ್‌ ಅವರ ಬಂಧನವಾಗಿದೆ.

ನಕಲಿ ದಾಖಲೆಗಳನ್ನು ಬಳಸಿ, ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಕೆಲಸದಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ಅವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಅವರ ಬಂಧನವಾಗಿದೆ. ರವೀಂದರ್‌ ಅವರನ್ನು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದ್ದು, ನಂತರ ನ್ಯಾಯಾಧೀಶರ ಆದೇಶದಿಂದ ರವೀಂದರ್‌ ಅವರು ಸದ್ಯ ಜೈಲಿನಲ್ಲಿದ್ದಾರೆ. ವಂಚನೆ ಪ್ರಕರಣ ರವೀಂದರ್‌ ಅವರ ವಿರುದ್ಧ ಇದಕ್ಕೂ ಮೊದಲು ದಾಖಲಾಗಿತ್ತು. ಇದೀಗ ಇನ್ನೊಂದು ಸೇರಿಕೊಂಡಿದೆ.

Leave A Reply

Your email address will not be published.