ಮಂಗಳೂರು: ಬಸ್ಸಿನಲ್ಲಿ ಹಿಂದೂ ಯುವತಿಗೆ ಕಿರುಕುಳ!! ಬೆಳ್ತಂಗಡಿಯಲ್ಲಿ ಬಸ್ ಇಳಿಯುತ್ತಿದ್ದಂತೆ ಕಬೀರ ಪೊಲೀಸರ ವಶಕ್ಕೆ

 

ಮಂಗಳೂರು:ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ವ್ಯಕ್ತಿಯೊರ್ವನನ್ನು ಸ್ಥಳೀಯರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆಯು ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.ಅಸಭ್ಯವಾಗಿ ವರ್ತಿಸಿದ ಆರೋಪಿಯನ್ನು ಕಬೀರ್ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಮೂಲತಃ ಮೂಡಿಗೆರೆ ನಿವಾಸಿಯಾದ ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಮಂಗಳೂರಿನಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಬಸ್ಸಿನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ನಗರದ ಜ್ಯೋತಿ ಬಳಿಯಲ್ಲಿ ಆರೋಪಿ ಕಬೀರ್ ಬಸ್ಸು ಏರಿದ್ದ.

ಬಳಿಕ ಯುವತಿ ಕುಳಿತಿದ್ದ ಸೀಟ್ ನಲ್ಲೇ ಕುಳಿತ ಆತ ಬೆಳ್ತಂಗಡಿ-ಬಿಸಿ ರೋಡ್ ಮಧ್ಯೆ ಮಡಂತ್ಯಾರ್ ಸಮೀಪಸುತ್ತಿದ್ದಂತೆ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಕೂಡಲೇ ಗಾಬರಿಗೊಂಡ ಯುವತಿ ಬೆಳ್ತಂಗಡಿಯಲ್ಲಿರುವ ತನ್ನ ಸಹೋದರ ಹಾಗೂ ತಂದೆಗೆ ವಿಚಾರ ತಿಳಿಸಿದ್ದಳು.

ಬಸ್ಸು ಬೆಳ್ತಂಗಡಿ ನಿಲ್ದಾಣ ತಲುಪುತ್ತಿದ್ದಂತೆ ಆಕೆಯ ಸಹೋದರ ಹಾಗೂ ತಂದೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾದ ಆರೋಪಿಯನ್ನು ಬಸ್ಸು ಚಾಲಕ, ನಿರ್ವಹಕರ ಸಹಕಾರದಿಂದ ಬಸ್ಸಿನಿಂದ ಕೆಳಗೆ ಇಳಿಸಿದ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸದ್ಯ ಠಾಣೆಯಲ್ಲಿ ಆರೋಪಿ ವಿರುದ್ಧ ಯುವತಿ ನೀಡಿದ ದೂರನಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.