ವಿಟ್ಲ:ಮೆಚ್ಚಿ ಜಾತ್ರೆಗೆ ಪ್ರಸಿದ್ಧಿ ಪಡೆದ ಪುರಾತನ ಕೆಲಿಂಜ ಉಳ್ಳಾಲ್ತಿ ಕ್ಷೇತ್ರಕ್ಕೆ ಕನ್ನ!!ಬೆಳ್ಳಂಬೆಳಗ್ಗೆ ಬೆಳಕಿಗೆ ಬಂದ ಘಟನೆ!

ವಿಟ್ಲ: ಮೆಚ್ಚಿ ಜಾತ್ರೆಗೆ ಪ್ರಸಿದ್ಧಿ ಪಡೆದ ತುಳುನಾಡಿನ ಪುರಾತನ ಕಾರ್ಣಿಕ ಕ್ಷೇತ್ರ ವಿಟ್ಲ ವೀರಕಂಬ ಸಮೀಪದ ಕೆಲಿಂಜ ಉಳ್ಳಾಲ್ತಿ ಕ್ಷೇತ್ರದಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.

ನಿನ್ನೆ ತಡರಾತ್ರಿಯ ವೇಳೆಗೆ ಘಟನೆ ನಡೆದಿದೆ ಎಂದು ಶಂಕಿಸಲಾಗಿದ್ದು, ಅಪಾರ ಭಕ್ತರ ಪ್ರಾರ್ಥನೆಯ ಕ್ಷೇತ್ರದಲ್ಲಿ ಕಳ್ಳತನ ನಡೆದಿರುವ ಸುದ್ದಿ ಎಲ್ಲೆಡೆ ಹಬ್ಬಿದೆ.

ಪುರಾತನ ಕಾರ್ಣಿಕ ಕ್ಷೇತ್ರ ಇದಾಗಿದ್ದು, ಮೆಚ್ಚಿ ಜಾತ್ರೆಗೆ ಪ್ರಸಿದ್ಧಿ ಪಡೆದು, ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುವ ತಾಯಿಯಾಗಿ ನೆಲೆನಿಂತಿರುವ ಉಳ್ಳಾಳ್ತಿಯ ಮಹಿಮೆಗೆ ಸಾವಿರ ಸಾವಿರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವುದಲ್ಲದೇ, ಭಂಡಾರ ಹೊರಡುವ ವೇಳೆಗೆ ಪ್ರತೀ ಮನೆಯಲ್ಲೂ ಬಾಗಿಲು ಹಾಕದೆ ದರ್ಶನ ಪಡೆಯುತ್ತಿರುವ ಪ್ರತೀತಿ ಇದೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Leave A Reply

Your email address will not be published.