ಪುತ್ತೂರಿನಲ್ಲಿ RSS ಬೈಠಕ್ ಆರಂಭ; ಎಸ್ಕಾರ್ಟ್ ವಾಹನ, ಗನ್ ಮ್ಯಾನ್ ಬಿಟ್ಟು ಬೈಠಕ್ ಗೆ ತೆರಳಿದ BJP ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು

ಮಂಗಳೂರು: ಆರ್.ಎಸ್.ಎಸ್. ಕರ್ನಾಟಕ ದಕ್ಷಿಣ
ಪ್ರಾಂತ ಬೈಠಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಸಂಘ ಪರಿವಾರ ಹಾಗೂ ಬಿಜೆಪಿಯ ಹಲವು ನಾಯಕರು ಭಾಗಿಯಾಗಿದ್ದಾರೆ.

ಆರ್.ಎಸ್.ಎಸ್ ಬೈಠಕ್ ಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಸ್ಕಾರ್ಟ್ ವಾಹನ, ಗನ್ ಮ್ಯಾನ್ ಬಿಟ್ಟು ತೆರಳಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ಎರಡು ದಿನ ಆರ್.ಎಸ್.ಎಸ್. ಬೈಠಕ್ ನಡೆಯಲಿರುವ ಆರ್.ಎಸ್.ಎಸ್. ಸಹ ಸಹಕಾರ್ಯವಾಹಕ ಮುಕುಂದ್ ನೇತೃತ್ವದಲ್ಲಿ ಬೈಠಕ್ ನಡೆಯುತ್ತಿದೆ. ಆರ್.ಎಸ್.ಎಸ್. ಅಖಿಲ ಭಾರತ ಪ್ರತಿನಿಧಿ ಸಭಾದ ಪ್ರಮುಖರು ಸೇರಿದಂತೆ 800 ಜನ ಬೈಠಕ್ ನಲ್ಲಿ ಭಾಗಿಯಾಗಲಿದ್ದಾರೆ.

Leave A Reply

Your email address will not be published.