ಈ ದೇವಸ್ಥಾನದಲ್ಲಿ ಹಾಕಿರುವ ಬೋರ್ಡ್ ಎಲ್ಲೆಡೆ ವೈರಲ್ ಏಕೆ ಗೊತ್ತೆ

ಪ್ರತಿದೇವಸ್ಥಾನಕ್ಕೆ ಹೋಗುವ ಮುನ್ನ ಪಾದರಕ್ಷೆ ಇಲ್ಲಿಯೇ ಬಿಡಿ.‌ಶಾಂತತೆ ಕಾಪಾಡಿ ಎಂಬ ಬರಹ ಸಾಮಾನ್ಯ. ಆದರೆ, ಇಲ್ಲೊಂದು ದೇವಸ್ಥಾನದಲ್ಲಿ ಬರೆದ ಬೋರ್ಡ್ ಎಲ್ಲೆಡೆ ಸುದ್ದಿಯಗುತ್ತಿದೆ.

ಇಲ್ಲೊಂದು ದೇವಸ್ಥಾನದಲ್ಲಿ ಪದವಿ ಮತ್ತು ಪಾದರಕ್ಷೆ ಇಲ್ಲಿಯೆ ಬಿಡ್ರಿ ಎಂದು ಬರೆಯುವ ಮೂಲಕ ಭಕ್ತರಲ್ಲಿ ಚಿಂತನೆ ಹುಟ್ಟುಹಾಕಲಾಗಿದೆ. ಈ ರೀತಿಯ ಬರಹ ಬರೆದಿರುವುದು ಹಾವೇರಿ ನಗರದ ತೇರುಬೀದಿಯ ಹನುಮಂತ ದೇವರ ದೇವಸ್ಥಾನದಲ್ಲಿ. ಈ ದೇವಸ್ಥಾನದಲ್ಲಿ ಪಾದರಕ್ಷೆ ಬಿಡುವ ಜಾಗದಲ್ಲಿ ಈ ರೀತಿ ಬರಹ ಬರೆಯಲಾಗಿದೆ. ದೇವಸ್ಥಾನದ ಹೊರಗೆ ಪದವಿ, ಹುದ್ದೆ, ಸ್ಥಾನಮಾನ ಮತ್ತು ಬಡವ – ಶ್ರೀಮಂತ. ಆದರೆ, ದೇವಸ್ಥಾನಕ್ಕೆ ಬಂದರೆ ಇಲ್ಲಿ ಎಲ್ಲರೂ ಭಕ್ತರೇ ಎಂಬ ಅರ್ಥದಿಂದ ಈ ಬರಹ ಬರೆಸಲಾಗಿದೆ ಎನ್ನುತ್ತಾರೆ ಇಲ್ಲಿಯ ಅರ್ಚಕರು.

ಹಾವೇರಿಯ ಈ ತೇರು ಬೀದಿ ಹನುಮಂತ ದೇವರ ದೇವಸ್ಥಾನ ವ್ಯಾಸಕಾಲದಲ್ಲಿ ನಿರ್ಮಾಣಗೊಂಡಿದೆ.
ದೇವಸ್ಥಾನದಲ್ಲಿ ಪ್ರತಿಗೋಡೆ ಮೇಲೆ ನುಡಿಬರಹಗಳನ್ನು ಬರೆಸಲಾಗಿದೆ. 

Leave A Reply

Your email address will not be published.