ಮಣಿಪಾಲ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ದಳದಿಂದ ದಾಳಿ 4800ರೂ.ದಂಡ ವಸೂಲಿ

ಉಡುಪಿ : ನಮ್ಮ ಸರ್ಕಾರ ತಂಬಾಕು ನಿಯಂತ್ರಣ ಮಾಡಲೆಂದು ಕೊತ್ವ ಕಾಯಿದೆ ಜಾರಿ ಮಾಡ್ದಿದ್ದು.
ಉಡುಪಿ ಜಿಲ್ಲೆಯಲ್ಲಿ ಕೊತ್ವ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಪರವಾಗಿ ಉಡುಪಿ ತಾಲೂಕು ತಂಬಾಕು ನಿಯಂತ್ರಣ ತನಿಖಾ ದಳ ‘ ಮಣಿಪಾಲದಲ್ಲಿ ಇರುವ ಎಲ್ಲಾ ಅಂಗಡಿ, ಬಾರ್,ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ಮಾಡಿತ್ತು ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೇ ಸೆಕ್ಷನ್ 4,6(ಎ) 6(ಬಿ ) ಅಡಿಯಲ್ಲಿ 28 ಪ್ರಕರಣಗಳು ದಾಖಲೆ ಮಾಡಿ,4800 ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಈ ಸಂದರ್ಭದಲ್ಲಿ ಶಿರ್ವದ ಸಮುದಾಯದ ಆರೋಗ್ಯ ಕೇಂದ್ರ ದ ವೈದ್ಯ ಅಧಿಕಾರಿ ಡಾಕ್ಟರ್ ಸುಬ್ರಮಣ್ಯ ರಾವ್ ಮತ್ತು ಹಿರಿಯ ವೈದ್ಯ ನೀರಿಕ್ಷಣ ಅಧಿಕಾರಿ ದೇವಪ್ಪ ಪಟಗಾರ್,ಹಾಗೂ ಅಲ್ಲಿನ ಶಿಕ್ಷಣ ಅಧಿಕಾರಿ ಚಂದ್ರಕಲಾ ಮತ್ತು ಇತರರು ಉಪಸ್ಥಿತರಿದ್ದರು ಇದ್ದರು.

Leave A Reply

Your email address will not be published.