ಆಕಸ್ಮಿಕವಾಗಿ ಕೆರೆಗೆ ಬಿದ್ದು ಯುವತಿ ಮೃತ್ಯು
![](https://hosakannada.com/wp-content/uploads/2022/07/IMG-20220630-WA0081.jpg)
ಉಡುಪಿ : ಆಕಸ್ಮಿಕವಾಗಿ ಯುವತಿಯೊಬ್ಬಳು ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಡಂಬ ಎಂಬಲ್ಲಿ ನಡೆದಿದೆ.
![](https://hosakannada.com/wp-content/uploads/2024/07/First.jpeg)
ಮೃತಪಟ್ಟ ಯುವತಿಯನ್ನು ಮಡಂಬ ಗೋಪಾಲಶೆಟ್ಟಿ ಅವರ ಪುತ್ರಿ ಶರ್ಮಿಳಾ (22) ಎಂದು ಗುರುತಿಸಲಾಗಿದೆ.
![](https://hosakannada.com/wp-content/uploads/2024/07/Middle.jpeg)
ಜೂ.30ರಂದು ಬೆಳಿಗ್ಗೆ ಬೆಂಗಳೂರಿನಿಂದ ಊರಿಗೆ ಶರ್ಮಿಳಾ ಬಂದಿದ್ದ, ಶರ್ಮಿಳಾ ಮನೆ ಸಮೀಪವೇ ಇರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.