ಮನೆಯಲ್ಲಿಯೇ ಸಿಗುವ ಈ ಮೂರು ವಸ್ತುಗಳಿಂದ ಡಯಾಬಿಟಿಸ್ ನಿಯಂತ್ರಿಸಬಹುದು!! ಹೇಗೆ ಗೊತ್ತಾ!?

ಇತ್ತೀಚಿನ ದಿನಗಳಲ್ಲಿ ಡಯಾಬಿಟಿಸ್ ಸಂಖ್ಯೆ ಜನರಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಮ್ಮ ಆಹಾರ ಪದ್ಧತಿಯಾಗಿದ್ದು, ಇದನ್ನು ನಾವು ಮನೆಯಲ್ಲಿಯೇ ಪರಿಹರಿಸಿ ಕೊಳ್ಳಬಹುದು.

ಮನೆಯಲ್ಲಿಯೇ ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಕಮ್ಮಿ ಮಾಡಬಹುದು, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು .

ವಾಸ್ತವವಾಗಿ ಹೆಚ್ಚಿನ ಜನರು ಕಳಪೆ ಆಹಾರ ಪದಾರ್ಥಗಳಿಂದ ಮಧುಮೇಹಕ್ಕೆ ಗುರಿಯಾಗುತ್ತಾರೆ.
ಹೀಗೆ ಆದ ಸಂದರ್ಭದಲ್ಲಿ ಕೆಲವರು ನೈಸರ್ಗಿಕವಾಗಿ ವಿಧಾನಗಳಿಂದ ಪರಿಹಾರ ಬಳಸಿದರೆ, ಇನ್ನು ಕೆಲವರು ಔಷಧಿಗಳನ್ನು ಬಳಸುತ್ತಾರೆ.

ನೈಸರ್ಗಿಕ ವಿಧಾನಗಳಿಂದ ಮಧುಮೇಹ ಕಡಿಮೆ ಮಾಡಬಹುದು :

ತುಳಸಿ ಎಲೆ: ಇದು ರಕ್ತದಲ್ಲಿನ ಸಕ್ಕರೆ ನಿಲ್ಲಿಸಬಹುದು, ಇದು ಮಧುಮೇಹಕ್ಕೆ ಉತ್ತಮ ಮನೆಮದ್ದು. ತುಳಸಿ ಎಲೆಗಳು ಆಂಟಿ ಆಕ್ಸಿಡೆಂಟ್ ಒಳಗೊಂದಿರುತ್ತದೆ ಹಾಗೂ ಇನ್ಸೂಲಿನ್ ಹೆಚ್ಚು ಉತ್ಪಾದನೆ ಮಾಡಿ ಗ್ಲುಕೋಸ್ ಕಮ್ಮಿ ಮಾಡುತ್ತದೆ.

ಮಾವಿನ ಎಲೆಗಳು: ಈ ಎಲೆ ಮಧುಮೇಹ ರೋಗಿಗಳಿಗೆ ಬಹಳ ಉಪಯುಕ್ತವಾಗಿದೆ. ಇದರಲ್ಲಿ ವಿಟಮಿನ್’ ಸಿ ‘, ವಿಟಮಿನ್’ ಎ ‘,ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುತ್ತದೆ. ಈ ಎಲೆಗಳು ಇನ್ಸೂಲಿನ್ ಮಟ್ಟವನ್ನು ಸಮತೋಲನದಲ್ಲಿ ಇರಿಸುತ್ತದೆ.

ಜಾಮೂನ್ ಬೀಜಗಳು : ಸಾಮಾನ್ಯವಾಗಿ ಜಾಮೂನ್ ಅಥವಾ ನೇರಳೆ ಹಣ್ಣು ತಿಂದು ಬೀಜ ಎಸೆಯುತ್ತೇವೆ. ಆದರೆ ಇದು ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಇದರ ಬೀಜದ ಪುಡಿ ಚಾ ಅಥವಾ ನೀರಿಗೆ ಹಾಕಿ ಕುಡಿಯುವುದರಿಂದ ಮಧು ಮೇಹ ತಡೆಗಟ್ಟ ಬಹುದು.

Leave A Reply

Your email address will not be published.