ಬೆಳ್ತಂಗಡಿ: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯ ಹಳೆ ವಿದ್ಯಾರ್ಥಿ ಸಂಘ ಪುನರ್ರಚನೆ

ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯ ಹಳೆ ವಿದ್ಯಾರ್ಥಿ ಸಂಘದ ಪುನರ್ರಚನೆ ಯಶಸ್ವಿಯಾಗಿ ನೆರವೇರಿತು.

ಗೌರವಾಧ್ಯಕ್ಷರಾಗಿ ರಾಘವೇಂದ್ರ ಭಟ್, ಗೌರವ ಸಲಹೆಗಾರರಾಗಿ ಶ್ರೀಮತಿ ವಿಜಯ ಕುಂಜಾಡಿ, ಅಧ್ಯಕ್ಷರಾಗಿ ಸಂತೋಷ್ ಮಂಜಿಲ, ಉಪಾಧ್ಯಕ್ಷರಾಗಿ ಹೇಮಂತ್ ಬಿದಿರಕಾಡು, ಅರುಣ್ ಕುಂಡಾಜೆ, ಕಾರ್ಯದರ್ಶಿಯಾಗಿ ಶಿವರಾಜ್ ಅಜ್ಜಾಡಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಹುಲಿಮೇರು ಪಲ್ಕೆ, ಕೋಶಾಧಿಕಾರಿಯಾಗಿ ರಾಜೇಶ್ ಹುಲಿಮೇರು, ನಾಮ ನಿರ್ದೇಶಿತ ಸದಸ್ಯರಾಗಿ ಸದಾಶಿವ ಹುಲಿಮೇರು, ಹರೀಶ್ ಕಲ್ಲಬೆಟ್ಟು ಆಯ್ಕೆಯಾದರು. ಶಾಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಎಲ್ಲರೂ ಒಟ್ಟು ಸೇರಿ ಪ್ರಯತ್ನಿಸುವುದೆಂದು ನಿರ್ಧರಿಸಲಾಯಿತು.

Leave A Reply

Your email address will not be published.