“ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ”

ಜಗಳೂರು -18: ಜಗಳೂರು ತಾಲ್ಲೂಕಿನ ಸೊಕ್ಕೆ ಹೋಬಳಿಯ ಕ್ಯಾಸನಹಳ್ಳಿ ಗ್ರಾಮದಲ್ಲಿ ಇಂದು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಜಗಳೂರು ಶಾಸಕ, ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರಾದ ಎಸ್ ವಿ ರಾಮಚಂದ್ರಪ್ಪನವರು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಕ್ಯಾಸನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ನೆಡೆದ ಹಗರಣವನ್ನು ಶಾಸಕರ ಎದುರೆ ಎಳೆಎಳೆಯಾಗಿ ಬಿಚ್ಚಿಟ್ಟ ಧೀರ ಹುಡುಗಿ ರೇಣುಕಾ.

ಸ್ಥಳದಲ್ಲಿಯೇ ಒಂದುಕೋಟಿ ಎಪ್ಪತ್ತೋಂದು ಲಕ್ಷದ ಹಗರಣ ತನಿಖೆಗೆ ಆದೇಶಿಸಿದರು,

ಹಾಗೂ ಪಿಡಿಓ ಬಸವರಾಜಯ್ಯ ಬದಲಾಯಿಸಿ, ಸ್ಥಳಕ್ಕೆ ಭೇಟಿ ನೀಡಲು ಜಿಲ್ಲಾಪಂಚಾಯ್ತಿ ಕಾರ್ಯನಿರ್ವಾಹಕರಿಗೆ ಆದೇಶಿಸಿದರು.

Leave A Reply

Your email address will not be published.