ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಿಗೆ ವರ್ಗಾವಣೆ

ಬೆಳ್ತಂಗಡಿ: ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸರಿಗೆ ವರ್ಗಾವಣೆಯಾಗಿದೆ.

ಪ್ರವೀಣ್

ಸರಿಸುಮಾರು ಏಳು ವರ್ಷಗಳಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಪೊಲೀಸರಿಗೆ ಇದೀಗ ದಕ್ಷಿಣ ಕನ್ನಡದ ವಿವಿಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರಾಹುಲ್ ರಾವ್

ಪ್ರವೀಣ್ ಅವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ, ವಿಶ್ವನಾಥ್ ಅವರನ್ನು ಬೆಳ್ತಂಗಡಿ ಠಾಣೆಗೆ, ರಾಹುಲ್ ರಾವ್ ಅವರನ್ನು ಪುಂಜಾಲಕಟ್ಟೆಗೆ, ರವೀಂದ್ರ ಅವರನ್ನು ವೇಣೂರು ಪೊಲೀಸ್ ಠಾಣೆಗೆ ಹಾಗೂ ಬೆನ್ನಿಚ್ಚನ್ ಅವರನ್ನು ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ವಿಶ್ವನಾಥ್
ರವೀಂದ್ರ

ವಿಶ್ವನಾಥ್ ಹಾಗೂ ಪ್ರವೀಣ್ ಅವರು ಈಗಾಗಲೇ ವರ್ಗಾವಣೆಗೊಂಡಿದ್ದು, ರಾಹುಲ್ ರಾವ್ ಅವರು ಇಂದು ವರ್ಗಾವಣೆಗೊಂಡಿದ್ದಾರೆ. ರವೀಂದ್ರ ಹಾಗೂ ಬೆನ್ನಿಚ್ಚನ್ ಅವರು ಮುಂದಿನ ವಾರ ವರ್ಗಾವಣೆಗೊಳ್ಳಲಿದ್ದಾರೆ. ಅದಲ್ಲದೆ ಇನ್ನೂ ನಾಲ್ವರು ಪೊಲೀಸರು ಸದ್ಯದಲ್ಲೇ ವರ್ಗಾವಣೆಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಬೆನಿಚ್ಚನ್

Leave A Reply

Your email address will not be published.