ತಮಿಳುನಾಡಿನ ಸಚಿವರ ಮಗಳು ಕರ್ನಾಟಕದ ಯುವಕನೊಂದಿಗೆ ಓಡಿ ಹೋಗಿ ಮದುವೆ!! ಮನೆಯವರಿಂದ ಬೆದರಿಕೆ-ಸೂಕ್ತ ರಕ್ಷಣೆ ಕೋರಿ ಪೊಲೀಸರ ಮೊರೆ ಹೋದ ಜೋಡಿ

ತಮಿಳುನಾಡು ರಾಜ್ಯ ಸರ್ಕಾರದ ಮುಜರಾಯಿ ಸಚಿವ ಶೇಖರ್ ಬಾಬು ಅವರ ಮಗಳು ಬೆಂಗಳೂರಿನ ತನ್ನ ಪ್ರಿಯಕರನೊಂದಿಗೆ ಓಡಿ ಬಂದು ಮದುವೆಯಾಗಿದ್ದಾರೆ.

ಸಚಿವರ ಮಗಳಾದ ಜಯ ಕಲ್ಯಾಣಿ ಅವರ ಪ್ರೇಮ ಪ್ರಕರಣವು ತಮಿಳು ನಾಡಿನಲ್ಲಿ ಗದ್ದಲ ಸೃಷ್ಟಿ ಮಾಡಿದ ಬೆನ್ನಲ್ಲೇ ಯುವತಿ ಕರ್ನಾಟಕಕ್ಕೆ ಓಡಿ ಬಂದಿದ್ದು, ಕರ್ನಾಟಕ ಮೂಲದ ತನ್ನ ಪ್ರಿಯಕರನೊಂದಿಗೆ ಹಾಲಸ್ವಾಮಿ ಮಠದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇತ್ತ ತನ್ನ ಮಗಳು ಓಡಿ ಹೋದ ಸುದ್ದಿ ತಿಳಿದ ಸಚಿವರು ಕೆಂಡಾಮಂಡಲವಾಗಿದ್ದು ಮಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯುವ ಜೋಡಿಯು ಮದುವೆಯಾಗಿ ಬೆಂಗಳೂರು ಕಮಿಷನರ್ ಕಚೇರಿಗೆ ಆಗಮಿಸಿ ನಮಗೆ ಮನೆಯವರಿಂದ ಬೆದರಿಕೆ ಇದ್ದು ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದಾರೆ.

Leave A Reply

Your email address will not be published.