ಗೆಳೆಯನೊಂದಿಗೆ ಹೋಟೆಲ್ ರೂಮ್ ಗೆ ತೆರಳಿದ್ದ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ!! ಸಾವಿನ ಸುತ್ತ ಹಲವು ಅನುಮಾನ-ಗೆಳೆಯ ಎಸ್ಕೇಪ್

ಗೆಳೆಯನೊಂದಿಗೆ ಹೋಟೆಲ್ ಒಂದಕ್ಕೆ ತೆರಳಿದ್ದ ಮಹಿಳೆಯು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟ ಘಟನೆ ಕೇರಳ ರಾಜ್ಯದ ರಾಜಧಾನಿ ತಿರುವನಂತಪುರಂ ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗಾಯತ್ರಿ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಮೃತ ಗಾಯತ್ರಿ ಜ್ಯುವೆಲರಿ ಶೋರೂಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದೂ, ಘಟನೆ ನಡೆದ ದಿನ ಆಕೆಯ ಸ್ನೇಹಿತ ಪ್ರವೀಣ್ ಎಂಬಾತನೊಂದಿಗೆ ಹೋಟೆಲ್ ಗೆ ಬಂದಿದ್ದಾಳೆ. ಇಬ್ಬರೂ ಈ ಮೊದಲು ಒಂದೇ ಕಡೆ ಕೆಲಸ ಮಾಡಿದ್ದು, ಕಳೆದ ಎಂಟು ತಿಂಗಳ ಹಿಂದೆ ಪ್ರವೀಣ್ ನನ್ನು ಬೇರೊಂದು ಕಡೆಗೆ ವರ್ಗಾವಣೆ ಮಾಡಲಾಗಿತ್ತು.

ಮಧ್ಯಾಹ್ನ ಇಬ್ಬರೂ ಜೊತೆಯಾಗಿ ಹೋಟೆಲ್ ರೂಮ್ ಗೆ ತೆರಳಿದ್ದು, ಸಂಜೆಯಾಗುತ್ತಲೇ ರೂಮ್ ಲಾಕ್ ಮಾಡಿ ಪ್ರವೀಣ್ ಒಬ್ಬನೇ ಹೊರಬಂದಿದ್ದ. ಕೆಲ ಹೊತ್ತಿನಲ್ಲೇ ರೂಮ್ ನ್ನು ಪರಿಶೀಲಿಸಿದ ಹೋಟೆಲ್ ಸಿಬ್ಬಂದಿ ಮಹಿಳೆ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ನೋಡಿದಾಗ ಮಹಿಳೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮಹಿಳೆಯ ಬಾಯಿ ತುಂಬಾ ನೊರೆ ಬಂದಿದ್ದು ವಿಷ ಸೇವಿಸಿ ಆತ್ಮಹತ್ಯೆ ನಡೆಸಿದ್ದಾಳೆ ಎಂಬ ಅನುಮಾನ ಒಂದೆಡೆಯಾದರೆ, ಇನ್ನೊಂದೆಡೆ ಪ್ರವೀಣ್ ಕೊಲೆ ನಡೆಸಿ ಪರಾರಿಯಾಗಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Leave A Reply

Your email address will not be published.