ಸುಳ್ಯ:ಕುಕ್ಕರ್ ಸ್ಫೋಟಗೊಂಡು ಅಪಾಯದಿಂದ ಪಾರಾದ ಗೃಹಿಣಿ!! ಕುಕ್ಕರ್ ನಲ್ಲಿ ಅಡುಗೆ ಮಾಡುವ ಮುನ್ನ ಮಹಿಳೆಯರೇ ಎಚ್ಚರ

ಸುಳ್ಯ: ಮುಂಜಾನೆಯ ಉಪಹಾರಕ್ಕೆ ಕುಕ್ಕರ್ ನಲ್ಲಿ ಪಲಾವ್ ಇಟ್ಟು ಇನ್ನೇನು ವಿಷಲ್ ಆಗುವ ಹೊತ್ತಿಗಾಗಲೇ ಕುಕ್ಕರ್ ಸ್ಫೋಟಗೊಂಡಿದ್ದು, ಗೃಹಿಣಿಯೋರ್ವರು ಅಪಾಯದಿಂದ ಪಾರಾದ ಘಟನೆ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿಂದ ವರದಿಯಾಗಿದೆ.

ಕಳಂಜ ನಿವಾಸಿ ವಾಸುದೇವ ಆಚಾರ್ಯ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕುಕ್ಕರ್ ಸ್ಫೋಟದಿಂದ ಮನೆಯ ಮೇಲ್ಛಾವಣಿ ಹಾನಿಗೊಂಡಿದೆ ಎಂದು ತಿಳಿದುಬಂದಿದೆ.

ಆಚಾರ್ಯರ ಪತ್ನಿ ಶ್ರೀಮತಿ ಸುಮಾ ಆಚಾರ್ಯ ಅಪಾಯದಿಂದ ಪಾರಾದ ಮಹಿಳೆಯಾಗಿದ್ದು, ಕುಕ್ಕರ್ ನಲ್ಲಿ ಪಲಾವ್ ಇಟ್ಟು ಒಂದು ವಿಷಲ್ ಆಗುವ ಹೊತ್ತಿಗೆ ಹೊರಗಿನಿಂದ ಯಾರೋ ಕರೆದರೆಂದು ನೋಡಲು ಹೋದಾಗ ಈ ಘಟನೆ ನಡೆದಿದೆ. ಸ್ಫೋಟಕ್ಕೆ ಕುಕ್ಕರ್ ನ ಒಂದು ಭಾಗ ಸುಮಾರು ದೂರ ಚಿಮ್ಮಿದ್ದು, ಅಡುಗೆ ಕೋಣೆಯ ತುಂಬೆಲ್ಲಾ ಪಲಾವ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಕುಕ್ಕರ್ ನಲ್ಲಿ ಅಡುಗೆ ಮಾಡುವ ಮುನ್ನ ಗೃಹಿಣಿಯರು ಎಚ್ಚರವಹಿಸುವುದು ಅಗತ್ಯ.

Leave A Reply

Your email address will not be published.