Vitla: ಬಾವಿಯೊಳಗೆ ಆಕ್ಸಿಜನ್‌ ಕೊರತೆ; ರಿಂಗ್‌ ಕಾರ್ಮಿಕರ ಸಾವು

Vitla: ಬಾವಿಗೆ ರಿಂಗ್‌ ಹಾಕಲೆಂದು ಇಳಿದಿದ್ದ ಕಾರ್ಮಿಕರು ಉಸಿರುಗಟ್ಟಿ ಸಾವಿಗೀಡಾದ ಘಟನೆಯೊಂದು ವಿಟ್ಲ ಸಮೀಪದ ಕೇಪು ಗ್ರಾಮದ ಪಡಿಬಾಗಿಲು ವಿದ್ಯಾಗಿರಿ ಶಾಲಾ ಸಮೀಪ ನಡೆದಿದೆ ಎಂದು ವರದಿಯಾಗಿದೆ.

ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ, ಮಲಾರ್‌ ನಿವಾಸಿ ಆಲಿ ಮೃತ ದುರ್ದೈವಿಗಳು.

30 ಅಡಿ ಆಳದ ಬಾವಿಗೆ ರಿಂಗ್‌ ಹಾಕಿ ನಂತರ ಕ್ಲೀನ್‌ ಮಾಡಲು ಬಾವಿಗೆ ಇವರು ಇಳಿದಿದ್ದರು. ಆದರೆ ಆಕ್ಸಿಜನ್‌ ಕೊರತೆಯಿಂದ ಮೃತ ಹೊಂದಿದ್ದು, ಓರ್ವ ಕೆಳಗೆ ಇಳಿದವನು ಮೇಲಕ್ಕೆ ಬಾರದ್ದಕ್ಕೆ ಇನ್ನೋರ್ವ ಕೆಳಗೆ ಇಳಿದಿದ್ದು, ಆತನೂ ಆಕ್ಸಿಜನ್‌ ಕೊರತೆಯಿಂದ ಮೃತ ಹೊಂದಿದ್ದಾನೆ.

ಇದನ್ನೂ ಓದಿ: ಜೈಲು ಪಾಲಾದ ಮುರುಘಾ ಶ್ರೀ; ಹೈಕೋರ್ಟ್ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್ !!

 

Leave A Reply

Your email address will not be published.