ಆರ್ ಎಸ್ ಎಸ್ ನ ಮುಸ್ಲಿಂ ಘಟಕದಿಂದ ‘ ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ಬೀಬಿ ಮುಸ್ಕಾನ್ ಗೆ ಬೆಂಬಲ|

ಅಯೋಧ್ಯಾ : ಕರ್ನಾಟಕದ ಮಂಡ್ಯದ ಕಾಲೇಜೊಂದರಲ್ಲಿ ಬುರ್ಖಾ ಧರಿಸಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಮುಸ್ಕಾನ್ ಸುತ್ತಲೂ ಯುವಕರ ಗುಂಪು ‘ ಜೈ ಶ್ರೀರಾಮ್’ ಘೋಷಣೆಗಳನ್ನು ಹೇಳುತ್ತಾ ಹೆದರಿಸಿದ್ದು ಸ್ವೀಕಾರಾರ್ಹವಲ್ಲ. ಇಂಥ ಚಟುವಟಿಕೆಗಳು ಹಿಂದೂ ಧರ್ಮಕ್ಕೆ ವಿರುದ್ಧವಾದುದು ಎಂದು ಎಂಆರ್ ಎಂ ಪ್ರಾಂತ ಸಂಚಾಲಕ ಅನಿಲ್ ಸಿಂಗ್ ( ಅವಧ್) ದೂರಿದ್ದಾರೆ.

ಹಿಂದೂ ಮಹಿಳೆಯರು ತಮ್ಮ ವಸ್ತ್ರಸಂಹಿತೆಯನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರಿರುವಾಗ ಬೀಬಿ ಮುಸ್ಕಾನ್ ಗೂ ಅದು ಅನ್ವಯಿಸುತ್ತದೆ ಎಂದಯ ಆರ್ ಎಸ್ ಎಸ್ ನ ಮುಸ್ಲಿಂ ಘಟಕವಾದ ಮುಸ್ಲಿಂ ರಾಷ್ಟ್ರೀಯ ಮಂಚ್ ( ಎಂಆರ್ ಎಂ) ಹೇಳಿದೆ.

ಹಿಜಾಬ್ ಭಾರತೀಯ ಸಂಸ್ಕೃತಿಯ ಅಂಗವಾಗಿರುವ ‘ ಪರ್ದಾ’ ಒಂದು ಭಾಗವೇ ಆಗಿದೆ. ಹಿಂದೂ ಮಹಿಳೆಯರಲ್ಲೂ ಕೆಲವರು ‘ ಪರ್ದಾ’ ಧರಿಸುತ್ತಾರೆ.

” ಮುಸ್ಕಾನ್ ನಮ್ಮ‌ ಸಮುದಾಯದ ಮಗಳು ಮತ್ತು ಸಹೋದರಿ. ಈ ವಿವಾದದ ಸಂದರ್ಭದಲ್ಲಿ ನಾವು ಮುಸ್ಕಾಯ ಪರ ನಿಲ್ಲುತ್ತೇವೆ” ಎಂದು ಅವರು ತಿಳಿಸಿದ್ದಾರೆ.

ಜೈಶ್ರೀರಾಮ್ ಘೋಷಣೆಯೊಂದಿಗೆ ವಿದ್ಯಾರ್ಥಿನಿಯನ್ನು ಬೆದರಿಸಿದ್ದು ತಪ್ಪು ಎಂದು ಹೇಳಿದ್ದಾರೆ.

Leave A Reply

Your email address will not be published.