ಮಂಗಳೂರು:ಫಾದರ್ ಮುಲ್ಲರ್ ಆಸ್ಪತ್ರೆಗೆ ಹೆರಿಗೆಗೆ ಬಂದ ತಾಯಿ ಮಗು ಮೃತ್ಯು|ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಕುಟುಂಬಸ್ಥರ ಆರೋಪ

ಮಂಗಳೂರು:ಹೆರಿಗೆಗೆಂದು ಫಾದರ್ ಮುಲ್ಲರ್ ಆಸ್ಪತ್ರೆಗೆ ಗರ್ಭಿಣಿ ಬಂದಾಗಲೇ ಮಗು ಸಾವನ್ನಪ್ಪಿದ್ದು, ಬಳಿಕ ತಾಯಿಯೂ ಮೃತ ಪಟ್ಟ ಘಟನೆ ಕಂಕನಾಡಿಯಲ್ಲಿ ನಿನ್ನೆ ನಡೆದಿದೆ.

ವಿಟ್ಲದ ಸವಿತಾ ಎಂಬವರು ಹೆರಿಗೆಗೆ ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ಬಂದಿದ್ದರು.ಆದರೆ, ಆ ಸಂದರ್ಭದಲ್ಲಿ ಗರ್ಭಿಣಿ ಹೊಟ್ಟೆಯಲ್ಲಿರುವ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ವೈದ್ಯರು ಇದನ್ನು ಮನೆಯವರ ಗಮನಕ್ಕೆ ತಂದಿದ್ದು, ಸಂಜೆಯ ವೇಳೆಗೆ ಗರ್ಭಿಣಿ ತಾಯಿ ಮೃತಪಟ್ಟಿದ್ದಾರೆ.

ಮಗು ಸಾವನ್ನಪ್ಪಿದ ಬಳಿಕ ತಾಯಿಗೆ ವೈದ್ಯಕೀಯವಾಗಿ ಯಾವುದೇ ಸರಿಯಾದ ಚಿಕಿತ್ಸೆ ಆಗದೇ,ವೈದ್ಯರ ನಿರ್ಲಕ್ಷ್ಯದಿಂದಲೇ ತಾಯಿ ಮೃತ ಪಟ್ಟಿದ್ದು ಇಲ್ಲವಾದಲ್ಲಿ ಅವರ ಜೀವ ಉಳಿಸಬಹುದಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದು,’ಮೃತರ ಕುಟುಂಬಸ್ಥರು ಡಾಕ್ಟರ್ ಹಾಗೂ ಸಂಸ್ಥೆ ಮೇಲೆ ದೂರು ದಾಖಲಿಸಲು ಹೇಳಿದ್ದು, ನಾವು ಡಾಕ್ಟರ್ ಬಳಿ ಮಾತಾಡಿದ ಬಳಿಕವಷ್ಟೇ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯ’ಎಂದು ತಿಳಿಸಿದ್ದಾರೆ.

Leave A Reply

Your email address will not be published.